Ad Widget

ಅಹಿಂಸೆಯ ಪರಮಾವತಾರಿ ಬುದ್ಧ- ಜಗವೆಲ್ಲ ಮಲಗಿರಲು ಅವನೆದ್ದ

ಸಮಾಚಾರ.ಕಾಂ.ಮೇ26: ಇಂದು ಬುದ್ಧ ಪೂರ್ಣಿಮೆ. ಗೌತಮ ಬುದ್ಧನ ಜನ್ಮ ಆಚರಣೆ. ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿ ವೈಶಾಖ್ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆ (ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ).

Ad Widget . Ad Widget . Ad Widget . Ad Widget . Ad Widget . Ad Widget

ಬುದ್ಧನ 2583 ನೇ ಜನ್ಮ ದಿನಾಚರಣೆ ಏಷ್ಯನ್ ಲೂನಿಸೋಲಾರ್ ಕ್ಯಾಲೆಂಡರ್ ಅನ್ನು ಆಧರಿಸಿದೆ, ಅದಕ್ಕಾಗಿಯೇ ಪ್ರತಿವರ್ಷ ದಿನಾಂಕಗಳು ಬದಲಾಗುತ್ತವೆ. ಭಗವಾನ್ ಬುದ್ಧ (Gautam Buddha)ರಾಜಕುಮಾರ ಸಿದ್ಧಾರ್ಥ ಗೌತಮನಾಗಿ ಕ್ರಿ.ಪೂ 563 ರಲ್ಲಿ ಲುಂಬಿನಿ (ಆಧುನಿಕ ದಿನ ನೇಪಾಳ) ದಲ್ಲಿ ಪೂರ್ಣಿಮಾ ತಿಥಿಯಲ್ಲಿ (ಹುಣ್ಣಿಮೆಯ ದಿನ) ಜನಿಸಿದನು.
ಹಿಂದೂ ಧರ್ಮದಲ್ಲಿ ಬುದ್ಧನನ್ನು ವಿಷ್ಣುವಿನ ಒಂಬತ್ತನೇ ಅವತಾರವೆಂದು ಪರಿಗಣಿಸಲಾಗಿದೆ.

Ad Widget . Ad Widget .

ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಬುದ್ಧನನ್ನು ಸ್ಮರಿಸುತ್ತಾರೆ ಮತ್ತು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ದೇಶಗಳಲ್ಲಿ ಆಚರಿಸುತ್ತಾರೆ. ಶ್ರೀಲಂಕಾದಲ್ಲಿ ಇದನ್ನು ವೆಸಾಕ್ ಎಂದು ಕರೆಯಲಾಗುತ್ತದೆ, ಆದರೆ ಪ್ರತಿಯೊಂದು ದೇಶವೂ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತದೆ.

ಬ್ರಿಟಿಷ್ ಲೈಬ್ರರಿ ಬ್ಲಾಗ್ ಪ್ರಕಾರ ಪ್ರತಿ ಹುಣ್ಣಿಮೆಯ ದಿನವು ಬೌದ್ಧರಿಗೆ ಶುಭ ದಿನವಾಗಿದೆ, ಆದರೆ ಎಲ್ಲಕ್ಕಿಂತ ಮುಖ್ಯವಾದುದು ಮೇ ತಿಂಗಳಲ್ಲಿ ಬರುವ ಹುಣ್ಣಿಮೆಯ ದಿನ, ಏಕೆಂದರೆ ಈ ಸಂದರ್ಭದಲ್ಲಿ ಗೌತಮ ಬುದ್ಧನ ಜೀವನದಲ್ಲಿ ಮೂರು ಪ್ರಮುಖ ಘಟನೆಗಳು ನಡೆದ ದಿನ. ಮೊದಲನೆಯದಾಗಿ, ರಾಜಕುಮಾರ ಸಿದ್ಧಾರ್ಥ ಮೇ ತಿಂಗಳ ಹುಣ್ಣಿಮೆಯ ದಿನದಂದು ಲುಂಬಿನಿಯಲ್ಲಿ ಜನಿಸಿದ್ದು, ಎರಡನೆಯದಾಗಿ, ಆರು ವರ್ಷಗಳ ಕಠಿಣ ತಪ್ಪಸ್ಸಿನಿಂದಾಗಿ ಅವರು ಬೋಧಿ ಮರದ ನೆರಳಿನಲ್ಲಿ ಜ್ಞಾನೋದಯವನ್ನು ಪಡೆದು ಮೇ ಹುಣ್ಣಿಮೆಯ ದಿನದಂದು ಬೋಧ್ ಗಯಾದಲ್ಲಿ ಗೌತಮ ಬುದ್ಧರಾಗಿದ್ದು, ಮೂರನೆಯದಾಗಿ, ಸತ್ಯವನ್ನು ಬೋಧಿಸಿದ 45 ವರ್ಷಗಳ ನಂತರ, ಅವರು ಎಂಭತ್ತು ವರ್ಷದವರಾಗಿದ್ದಾಗ, ಕುಸಿನಾರದಲ್ಲಿ ನಿರ್ವಾಣ ಕ್ಕೆ ಒಳಗಾಗಿದ್ದು.

ಗೌತಮ ಬುದ್ಧನು ಧರ್ಮ (ಕರ್ತವ್ಯ), ಅಹಿಂಸೆ, ಸಾಮರಸ್ಯ ಮತ್ತು ದಯೆಯನ್ನು ಬೋಧಿಸಿದನು. ತನ್ನ 30 ನೇ ವಯಸ್ಸಿನಲ್ಲಿ ತನ್ನ ಲೌಕಿಕ ಆಸ್ತಿ ಮತ್ತು ರಾಜಕುಮಾರವನ್ನು ತೊರೆದು ಸತ್ಯವನ್ನು ಹುಡುಕುವ ಜೀವನ ಮೊರೆ ಹೋದನು

ಈ ದಿನ, ಬೌದ್ಧರು ಮತ್ತು ಪ್ರಪಂಚದಾದ್ಯಂತದ ಬೌದ್ಧ ಧರ್ಮದ ವಿಶ್ವಾಸಿಗಳು ಪ್ರಾರ್ಥನೆ ಸಲ್ಲಿಸುತ್ತಾರೆ, ಧ್ಯಾನಿಸುತ್ತಾರೆ, ಉಪವಾಸಗಳನ್ನು ಆಚರಿಸುತ್ತಾರೆ ಮತ್ತು ಬುದ್ಧನ ಬೋಧನೆಗಳನ್ನು ಚರ್ಚಿಸುತ್ತಾರೆ. ಪವಿತ್ರ ಗಂಗಾ ನದಿಯಲ್ಲಿ ಮಿಂದೇಳುವ ಸಂಪ್ರದಾಯವೂ ಇದೆ.
ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ತೋರಿದವ ಗೌತಮ ಬುದ್ಧ. ವೈಶಾಖ ಮಾಸದ ಹುಣ್ಣಿಮೆ ದಿನವೇ ಬುದ್ಧ ಜಯಂತಿ. ಸಿದ್ದಾರ್ಥ ಬುದ್ಧನಾಗಿದ್ದು ಇದೇ ದಿನ. ಸಿದ್ದಾರ್ಥ ಹುಟ್ಟಿದ್ದೂ ಇದೇ ದಿನ. ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಸಂಘರ್ಷಕ್ಕೆ ನಾಂದಿಯಾಯಿತು. ಸ್ಪರ್ಶ- ಅಸ್ಪರ್ಶ

ಭಾವನೆಗಳು ಬಲವಾಗಿ ಬೇರೂರಿದ್ದವು. ಇಂತಹ ಸಮಯ ದಲ್ಲಿ 2500 ವರ್ಷಗಳ ಹಿಂದೆ ಮನುಕುಲದ ಉದ್ಧಾರಕ್ಕಾಗಿ ಮಾನವಮೂರ್ತಿ ಮೈದಾಳಿತು. ಆತನೇ ಗೌತಮ ಬುದ್ಧ
ಬುದ್ಧ ಪೂರ್ಣಿಮಾ ಯಶಸ್ಸಿಗೆ ಉತ್ತಮ ದಾರಿಗಳೆಂದರೆ ಸರಿಯಾದ ತಿಳಿವಳಿಕೆ, ಚಿಂತನೆ, ಕ್ರಿಯೆ, ಮಾತು, ಮನಸ್ಸು, ಜೀವನೋಪಾಯ, ಪ್ರಯತ್ನ ಹಾಗೂ ಏಕಾಗ್ರತೆ. ಸಿದ್ದಾರ್ಥ ಎಲ್ಲವನ್ನೂ ಪಡೆದುಕೊಂಡಿದ್ದರೂ ಅವುಗಳನ್ನು ಲೆಕ್ಕಿಸದೆ ದುಃಖ ನಿವಾರಣೆಯನ್ನೇ ಗುರಿಯಾಗಿಟ್ಟುಕೊಂಡು ಎಲ್ಲವನ್ನೂ ತೊರೆದು, ನಿಜದ ಬೆಳಕಿಗಾಗಿ ಹಂಬಲಿಸಿ ಅಡಿಯಿಟ್ಟವನು. ಬೆಳಕನ್ನು ಕಂಡುಕೊಂಡು ಬೆಳಕಾಗಿ ಇಂದಿಗೂ ಮನುಕುಲವನ್ನು ಬೆಳಗುತ್ತಿದ್ದಾನೆ. ತನ್ನ ಧ್ಯೇಯದಲ್ಲಿ ಅಪಾರ ಶ್ರದ್ಧೆ, ಶಕ್ತಿಯಲ್ಲಿ ವಿಶ್ವಾಸ ಮತ್ತು ದೃಢಚಿತ್ತವನ್ನು ಸಂಪಾದಿಸಿದ. ಭಯಕ್ಕೆ ಕಾರಣಗಳು ಅಕುಶಲ ಕರ್ಮಗಳಾದ ದುಷ್ಟವಾಕ್ಯ, ಅಶುದ್ಧವಾದ ಮನಸ್ಸು ಎಂದು ಬೋಧಿಸತ್ವನಿಗೆ ಮನವರಿಕೆಯಾಯಿತು.
‘ನಾನು ಹೇಳಿದೆ ಎಂಬ ಒಂದೇ ಕಾರಣಕ್ಕೆ ನನ್ನ ಮಾತುಗಳನ್ನು ನಂಬಬೇಡಿ. ಒರೆಗೆ ಹಚ್ಚಿ ಚಿನ್ನವೋ ಅಲ್ಲವೋ ಎಂದು ಪರೀಕ್ಷಿಸಿ. ಒಪ್ಪುವಂತೆ ನಿಮ್ಮ ಮತೀಯ ಒರೆಗಲ್ಲಿಗೆ ಉಜ್ಜಿ ನೋಡಿ. ನಿಮಗೆ ಸತ್ಯ ಎಂದು ಕಂಡುಬಂದರೆ ಅನುಸರಿಸಿ, ಇಲ್ಲ ಎಂದಾದಲ್ಲಿ ನೀವು ನಿಮ್ಮ ಮಾರ್ಗದಲ್ಲಿ ಮುಂದುವರಿಯಿರಿ’ ಎಂಬ ಉದಾತ್ತ ಚಿಂತನೆ ಬುದ್ಧನದು.
‘ಬುದ್ಧನ ದುಃಖ ಲೌಕಿಕ ದುಃಖವೇ ಹೊರತು ಜನ್ಮಾಂತರ ಗಳದ್ದಲ್ಲ. ಅದು ಮನಸ್ಸಿಗೆ ಅಂಟಿಕೊಳ್ಳುವ ವಿಚಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಎನ್ನುವ ಕಲ್ಪನೆ, ಬೌದ್ಧ ಧರ್ಮದ ನಂತರ ಸೇರಿರಬೇಕು’ ಎಂದು ಬಾಬಾಸಾಹೇಬ ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಅಂತಿಮವಾಗಿ ಬುದ್ಧನ ಸಂದೇಶವಾದ, ‘ಜಗತ್ತಿನಲ್ಲಿ ದುಃಖವಿದೆ. ಇದು ಮನುಷ್ಯರು ಮನುಷ್ಯರಿಗೆ ಮಾಡುವ ಅನ್ಯಾಯದ ಫಲ. ಆದರೆ ಅದಕ್ಕೆ ಪರಿಹಾರ ಮನುಷ್ಯನಲ್ಲೇ ಇದೆ. ಹಾಗಾಗಿ ಇತರರ ಜತೆ ಋಜುತನದಿಂದ ನಡೆದುಕೊಳ್ಳಬೇಕು. ಆ ಮೂಲಕ ಭೂಮಿಯನ್ನು ಋಜುತನದ ಸಾಮ್ರಾಜ್ಯವನ್ನಾಗಿ ಮಾಡಬೇಕು’ ಎಂಬುದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆ ಮಹಾ ಬುದ್ಧನಿಗೆ ನಿಜವಾದ ಕಾಣಿಕೆ ಸಲ್ಲಿಸಿದಂತಾಗುತ್ತದೆ.

Leave a Comment

Your email address will not be published. Required fields are marked *