ರಾಷ್ಟ್ರೀಯ

ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ, ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಲೊ ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತಾನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭೂತಾನ್‍ನ ರಾಜ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ಥಾಪಿತವಾದ ಪ್ರಾಶಸ್ತ್ರದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಲೋ ಅನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಭೂತಾನ್‍ನ ಸರ್ವಶ್ರೇಷ್ಠ ಪ್ರಜೆಗೆ ಈ ಗೌರವವನ್ನು ನೀಡಲಾಗುತ್ತದೆ. ಇಲ್ಲಿಯವರೆಗೂ […]

ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೋದಿ Read More »

ಕೇಜ್ರಿವಾಲ್ ಅರೆಸ್ಟ್/ ಸೇವೆಯಲ್ಲಿರುವಾಗಲೇ ಅರೆಸ್ಟ್ ಆದ ಮೊದಲ ಮುಖ್ಯಮಂತ್ರಿ

ಸಮಗ್ರ ನ್ಯೂಸ್: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‍ರನ್ನು ಅಕ್ರಮ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಒಂಬತ್ತು ಬಾರಿ ಇಡಿ ಸಮನ್ಸ್ ಕೊಟ್ಟಿದ್ದರೂ ವಿಚಾರಣೆಗೆ ಗೈರಾಗಿದ್ದ ಕೇಜ್ರಿವಾಲ್, ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆಧರೆ ಅಲ್ಲಿ ಕೇಜ್ರಿವಾಲ್ ಮನವಿ ತಿರಸ್ಕಾರವಾಗಿತ್ತು. ಇಡಿ ಅಧಿಕಾರಿಗಳು ದೆಹಲಿ ಸಿಎಂ ನಿವಾಸಕ್ಕೆ ತೆರಳಿ ಎರಡು ಗಂಟೆಗಳಿಗೂ ಹೆಚ್ಚು ಸಮಯ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿದ್ದರು. ಇದರೊಂದಿಗೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಒಟ್ಟು ಐವರನ್ನು ಅರೆಸ್ಟ್ ಮಾಡಿದಂತಾಗಿದೆ. ಅರವಿಂದ್ ಕೇಜ್ರಿವಾಲ್

ಕೇಜ್ರಿವಾಲ್ ಅರೆಸ್ಟ್/ ಸೇವೆಯಲ್ಲಿರುವಾಗಲೇ ಅರೆಸ್ಟ್ ಆದ ಮೊದಲ ಮುಖ್ಯಮಂತ್ರಿ Read More »

ನರೇಂದ್ರ ಮೋದಿ ಭೂತಾನ್ ಭೇಟಿ

ಸಮಗ್ರ ನ್ಯೂಸ್: ನೆರೆಯ ದೇಶ ಭೂತಾನ್‍ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದು, ಪಾರೋ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಬೆ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಭೂತಾನ್‍ನ ಥಿಂಪುವಿನಲ್ಲಿ ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಿಸಲಾದ ಅತ್ಯಾಧುನಿಕ ಜಿಯಾಲ್ಟುನ್ಸ್ ಜೆಟ್ಸನ್ ಪೆಮಾ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ನಿನ್ನೆಯೇ ಪ್ರಧಾನಿ ಮೋದಿ ಭೂತಾನ್‍ಗೆ ಭೇಟಿ ನೀಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ಒಂದು ದಿನ ತಡವಾಗಿ ಭೇಟಿ ನೀಡಿದ್ದಾರೆ.

ನರೇಂದ್ರ ಮೋದಿ ಭೂತಾನ್ ಭೇಟಿ Read More »

ಅಕ್ರಮ ಮದ್ಯ ನೀತಿ ಪ್ರಕರಣ/ ಅರವಿಂದ್ ಕೇಜ್ರಿವಾಲ್ ಅರೆಸ್ಟ್

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರವಾಲ್ ಅವರನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜಿವಾಲ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ನಿರ್ದೇಶನಾಲಯದ ಕ್ರಮದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಇದಾದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಕಾನೂನು ತಂಡವು ಸುಪ್ರೀಂಕೋರ್ಟ್‍ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದೆ. ಇದರ ನಡುವೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯ ನೀತಿ ಪ್ರಕರಣ/ ಅರವಿಂದ್ ಕೇಜ್ರಿವಾಲ್ ಅರೆಸ್ಟ್ Read More »

ಆರ್ಥಿಕ ಅಸಮಾನತೆ ಪ್ರಮಾಣ ಹೆಚ್ಚಳ/ ದೇಶದ ಶೇ.1ರಷ್ಟು ಶ್ರೀಮಂತರಲ್ಲಿ ಶೇ.40.1ರಷ್ಟು ಸಂಪತ್ತು

ಸಮಗ್ರ ನ್ಯೂಸ್: ಆರ್ಥಿಕ ಅಸಮಾನತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಹೆಚ್ಚುತ್ತಲೇ ಇದ್ದು, 2022-23ರಲ್ಲಿ ದೇಶದ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟು ಆದಾಯದಲ್ಲಿ ಶೇ.22.6ರಷ್ಟು ಪಾಲು ಮತ್ತು ಸಂಪತ್ತಿನಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇನ್‍ಕಮ್ ಆಂಡ್ ವೆಲ್ತ್ ಇನ್‍ಈಕ್ವಾಲಿಟಿ ಇನ್ ಇಂಡಿಯಾ, 1922 – 2023: ದಿ ರೈಸ್ ಆಫ್ ದಿ ಬಿಲಿಯನೇರ್ ರಾಜ್ ಎಂಬ ಶೀರ್ಷಿಕೆ ಹೊಂದಿರುವ ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಥೋಮಸ್ ಪಿಕೆಟ್ಟಿ, ಹಾರ್ವರ್ಡ್ ಕೆನಡಿ ಸ್ಕೂಲ್‍ನ ಲೂಕಸ್

ಆರ್ಥಿಕ ಅಸಮಾನತೆ ಪ್ರಮಾಣ ಹೆಚ್ಚಳ/ ದೇಶದ ಶೇ.1ರಷ್ಟು ಶ್ರೀಮಂತರಲ್ಲಿ ಶೇ.40.1ರಷ್ಟು ಸಂಪತ್ತು Read More »

ತಪ್ಪು ಮಾಹಿತಿ ಹಿನ್ನಲೆ/ ಸುಪ್ರೀಂ ಮುಂದೆ ಕ್ಷಮೆಯಾಚಿಸಿದ ಪತಂಜಲಿ ಸಂಸ್ಥೆ

ಸಮಗ್ರ ನ್ಯೂಸ್: ಪತಂಜಲಿ (PATANJALI) ಸಂಸ್ಥೆ ವಿರುದ್ಧ ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ (BABA RAM DEV) ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ಅಲ್ಲದೇ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್‍ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ

ತಪ್ಪು ಮಾಹಿತಿ ಹಿನ್ನಲೆ/ ಸುಪ್ರೀಂ ಮುಂದೆ ಕ್ಷಮೆಯಾಚಿಸಿದ ಪತಂಜಲಿ ಸಂಸ್ಥೆ Read More »

ಅರುಣಾಚಲದ ವಿಚಾರದಲ್ಲಿ ಭಾರತದ ಪರ ನಿಂತ ದೊಡ್ಡಣ್ಣ/ ಅರುಣಾಚಲವನ್ನು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ ಎಂದು ಅಮೆರಿಕ

ಸಮಗ್ರ ನ್ಯೂಸ್: ಅರುಣಾಚರ ಪ್ರದೇಶವು ಚೀನಾಗೆ ಸೇರಿದ್ದಲ್ಲ. ಅದನ್ನು ನಾವು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ. ಇಲ್ಲಿನ ಆಕ್ರಮಣ, ಅತಿಕ್ರಮಣ, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದು ಅಮೆರಿಕ ಹೇಳಿದೆ. ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚೀನಾಗೆ ತೀವ್ರ ಮುಖಭಂಗ ಉಂಟುಮಾಡಿದೆ. ಈ ಪ್ರದೇಶದ ಹೆಸರನ್ನು ಬದಲಾಯಿಸುವ ಚೀನಾ ಪ್ರಯತ್ನವನ್ನು ಭಾರತ ವಿಫಲಗೊಳಿಸುತ್ತ ಬಂದಿದೆ. ಅರುಣಾಚಲ ಕುರಿತಾಗಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹೇಳಿಕೆಗಳನ್ನು

ಅರುಣಾಚಲದ ವಿಚಾರದಲ್ಲಿ ಭಾರತದ ಪರ ನಿಂತ ದೊಡ್ಡಣ್ಣ/ ಅರುಣಾಚಲವನ್ನು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ ಎಂದು ಅಮೆರಿಕ Read More »

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್:‌ ಮುಂಬಯಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೋಟ ಸಮೀಪ ಅಚ್ಲಾಡಿ ಮಕ್ಕಿಮನೆ ನಿವಾಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಅನ್ವಿಶ್‌ (19) ಚಿಕಿತ್ಸೆ ಫಲಿಸದೆ ಮುಂಬಯಿಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಘಟನೆ ನಡೆದಿದೆ. ಈತ ಕಾವಡಿ ವರದರಾಜ್‌ ಶೆಟ್ಟಿ ಮತ್ತು ಅಚ್ಲಾಡಿಯ ಲತಾ ಶೆಟ್ಟಿ ಅವರ ಪುತ್ರನಾಗಿದ್ದು ತಂದೆ ರೈಲ್ವೆ ಉದ್ಯೋಗಿಯಾಗಿದ್ದರು.ಅನ್ವಿಶ್‌ ಮುಂಬಯಿಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು 15 ದಿನದ ಹಿಂದೆ ಸಂಬಂಧಿಕರ ಮನೆಯಿಂದ ರಾತ್ರಿ ಬೈಕ್‌ನಲ್ಲಿ ಮರಳುತ್ತಿದ್ದಾಗ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ ಎಂದು

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

ಮಾ.31ರಂದು ದೇಶಾದ್ಯಂತ ಬ್ಯಾಂಕ್ ರಜೆ ಕ್ಯಾನ್ಸಲ್| RBI ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಮಾರ್ಚ್ 31ರ ಭಾನುವಾರದಂದು ದೇಶಾದ್ಯಂತ ಬ್ಯಾಂಕ್’ಗಳನ್ನು ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರ್ಧರಿಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಟ್ವೀಟ್ ಮೂಲಕ ಆರ್ ಬಿಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನು

ಮಾ.31ರಂದು ದೇಶಾದ್ಯಂತ ಬ್ಯಾಂಕ್ ರಜೆ ಕ್ಯಾನ್ಸಲ್| RBI ನಿಂದ ಮಹತ್ವದ ಆದೇಶ Read More »

ನವೋದ್ಯಮದಲ್ಲಿ ಭಾರತಕ್ಕೆ ಮೂರನೇ ಸ್ಥಾನ/ ದೇಶದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್

ಸಮಗ್ರ ನ್ಯೂಸ್: ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಾ ಮೂರನೇ ಸ್ಥಾನ ಪಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ‘ಸ್ಟಾರ್ಟ್ ಅಪ್ ಮಹಾಕುಂಭ’ದ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು. “ದೇಶದಲ್ಲಿ 2014ರ ವೇಳೆ ಕೇವಲ 100 ನವೋದ್ಯಮಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 1.25 ಲಕ್ಷಕ್ಕೆ ಮುಟ್ಟಿದೆ. ಈ ಪೈಕಿ ಶೇ 45ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. 12 ಲಕ್ಷ ಯುವಜನರು ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಬಿಲಿಯನ್ ಅಮೆರಿಕನ್ ಡಾಲರ್‍ಗಿಂತ

ನವೋದ್ಯಮದಲ್ಲಿ ಭಾರತಕ್ಕೆ ಮೂರನೇ ಸ್ಥಾನ/ ದೇಶದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್ Read More »