ರಾಷ್ಟ್ರೀಯ

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್?

Oneplus nord 2ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್​ಸಂಗ್ ಮೊಬೈಲ್​ಗಳ ನಡುವೆ ತನ್ನದೆ ಆದ ವಿಶೇಷ ಸ್ಥಾನ ಕಾಪಾಡಿಕೊಂಡಿರುವ ಒನ್​ಪ್ಲಸ್ (OnePlus) ಕಂಪೆನಿ ಸದ್ಯ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜುಲೈ 22 ರಂದು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ ನಾರ್ಡ್​ 2 ಸ್ಮಾರ್ಟ್​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ (Amazon) ಇಂಡಿಯಾ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ. ವಿಶೇಷ ಏನೆಂದರೆ, ನಾರ್ಡ್​ 2 […]

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್? Read More »

ದೇಶದಲ್ಲಿ ‌ಹಕ್ಕಿಜ್ವರ ಭೀತಿ| ದೆಹಲಿಯಲ್ಲಿ ಬಾಲಕ ಬಲಿ…!

ನವದೆಹಲಿ: ದೇಶದಲ್ಲಿ ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದ್ದು, ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ 12ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಕ್ಕಿ ಜ್ವರದಿಂದ ಸತ್ತ ಮೊದಲ ಪ್ರಕರಣ ಇದಾಗಿದ್ದು, ಆತಂಕ ಮೂಡಿಸಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ. ಇನ್ನು ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ

ದೇಶದಲ್ಲಿ ‌ಹಕ್ಕಿಜ್ವರ ಭೀತಿ| ದೆಹಲಿಯಲ್ಲಿ ಬಾಲಕ ಬಲಿ…! Read More »

ಅಶ್ಲೀಲ ಸಿನಿಮಾ ತಯಾರಿ ಮತ್ತು ಹಂಚಿಕೆ| ಉದ್ಯಮಿ ರಾಜ್ ಕುಂದ್ರಾ ಅರೆಸ್ಟ್

ಮುಂಬೈ: ಕೆಲವು ಆ್ಯಪ್​ಗಳ ಮೂಲಕ ಅಶ್ಲೀಲ ಸಿನಿಮಾಗಳನ್ನ ನಿರ್ಮಾಣ ಮಾಡಿ ಪ್ರಕಟಿಸುತ್ತಿದ್ದರೆಂಬ ಆರೋಪದ ಮೇಲೆ ಮುಂಬೈ ಕ್ರೈಮ್ ಬ್ರಾಂಚ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನ ಬಂಧಿಸಿದೆ. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಆರೋಪಿ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸೂಕ್ತ ಸಾಕ್ಷ್ಯವಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದಾರೆ. ರಾಜ್​ ಕುಂದ್ರಾ ಸೋಮವಾರ ವಿಚಾರಣೆಗಾಗಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್​ ಪ್ರಾಪರ್ಟಿ ಸೆಲ್​ಗೆ ಬಂದಿದ್ದರು

ಅಶ್ಲೀಲ ಸಿನಿಮಾ ತಯಾರಿ ಮತ್ತು ಹಂಚಿಕೆ| ಉದ್ಯಮಿ ರಾಜ್ ಕುಂದ್ರಾ ಅರೆಸ್ಟ್ Read More »

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ?

Cadbury Chocolate ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಫೇವರೆಟ್​​​ ಚಾಕ್​ಲೇಟ್​​. ಬಾಯಿ ಸಿಹಿ ಮಾಡೋಣ ಎಂಬ ಜಾಹೀರಾತು ಕಂಡೊಡನೆ ತಿನ್ನಬೇಕು ಅನಿಸದೆ ಇರಲ್ಲ. ಬಾಯಲ್ಲಿ ಇಟ್ಟೊಡನೆ ಕರಗುವ ಚಾಕ್​​ಲೇಟ್​​​ಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್​ಗಳ ಚಾಕ್​ಲೇಟ್​ ಬಂದರೂ ಕ್ಯಾಡ್​ಬರಿ ಡೈರಿ ಮಿಲ್ಕ್​​ ಡಿಮ್ಯಾಂಡ್​ ಎಂದಿಗೂ ಕುಗ್ಗಿಲ್ಲ. ಇನ್ನು ಪ್ರಪೋಸ್ ಮಾಡಲು ಕ್ಯಾಡ್​​ಬರಿ ಚಾಕ್​​ಲೇಟ್ ಗಳೇ ಬೇಕು. ಹುಡುಗಿಯರು ಸೇರಿದಂತೆ ಈ ರಸವತ್ತಾದ ಕಪ್ಪುಸುಂದರಿಗೆ ಮರುಳಾಗದವರು ಯಾರೂ ಇಲ್ಲವೇ ಇಲ್ಲ. ಆದರೆ

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ? Read More »

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್

ನವದೆಹಲಿ: ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಟ್ಸಪ್ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. 2016 ರ ಡಿಸೆಂಬರ್ ನಲ್ಲಿ ನಡೆದ ಎರಡು ವ್ಯಾಪಾರಿ ಕಂಪನಿಗಳ ನಡುವಿನ ಒಪ್ಪಂದದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ವ್ಯಾಪಾರ ಒಪ್ಪಂದಗಳಲ್ಲಿ ವಾಟ್ಸಪ್ ಮೆಸೇಜ್ ಗಳನ್ನು ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಎನ್ ವಿ ರಮಣ, ಜಸ್ಟಿಸ್ ಎ ಎಸ್ ಬೋಪಣ್ಣ ಮತ್ತು ಋಷಿಕೇಶ್ ರಾಯ್ ಅವರುಗಳ ಪೀಠ ಹೇಳಿದೆ. ಇಂದಿನ ಕಾಲದಲ್ಲಿ ವಾಟ್ಸಪ್

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್ Read More »

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….!

ಮಧ್ಯಪ್ರದೇಶ: ಇಲ್ಲಿನ ವಿದಿಶಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವ ವೇಳೆ 40 ಮಂದಿ ಬಾವಿಯೊಳಗೆ ಬಿದ್ದ ಘಟನೆ ನಡೆದಿದೆ. ಗುರುವಾರ ಸಂಜೆ ಆಟವಾಡುತ್ತಿದ್ದಾಗ ಬಾಲಕಿ ಒಬ್ಬಳು ಬಾವಿಗೆ ಬಿದಿದ್ದಾಳೆ. ವಿಷಯ ತಿಳಿದು ಹಲವಾರು ಜನರು ಬಾವಿಗೆ ಬಳಿ ತೆರೆಳಿದ್ದರು. ಈ ವೇಳೆ ಈ ಅನಾಹುತ ಸಂಭವಿಸಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ 19 ಜನರನ್ನು ರಕ್ಷಿಸಲಾಗಿದೆ, ಒಟ್ಟು 40 ಜನರು ಬಾವಿಯಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾವಿಯಿಂದ ಮೇಲೆತ್ತಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಯಿಂದ

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….! Read More »

ಪಾಪಿ ಪಾಕಿಸ್ತಾನಕ್ಕೆ ದೇಶದ ರಹಸ್ಯಗಳನ್ನು ಕೊಡುತ್ತಿದ್ದ ಭಾರತೀಯ ಯೋಧ…!

ನವದೆಹಲಿ: ಭಾರತದ ಸಂಪ್ರದಾಯಿಕ ವೈರಿ ಪಾಕಿಸ್ಥಾನಕ್ಕೆ ದೇಶದ ರಕ್ಷಣೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದ ಆರೋಪದಲ್ಲಿ ಯೋಧ ಸೇರಿದಂತೆ ಇಬ್ಬರನ್ನು ಬಂಡಿಸಲಾಗಿದೆ. ಭಾರತದ ಭದ್ರತೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಪಾಕಿಸ್ತಾನದ ಗುಪ್ತಚರ ಇಲಾಖೆ ಕೈಸೇರುತ್ತಿದ್ದವು. ಈ ಹಿನ್ನಲೆಯಲ್ಲಿ ರಾಜಸ್ಥಾನದ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ಗೆ ತರಕಾರಿ ಸರಬರಾಜು ಮಾಡುತ್ತಿದ್ದ ಹಬೀಬುಲ್ ರೆಹಮಾನ್ ಎಂಬಾತನನ್ನು ಬಂದಿಸಲಾಗಿತ್ತು. ಬಳಿಕ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ತರಕಾರಿ ಸರಬರಾಜು ಮಾಡುತ್ತಿದ್ದ ಸಂದರ್ಭ ಯೋಧರೊಬ್ಬರಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದು

ಪಾಪಿ ಪಾಕಿಸ್ತಾನಕ್ಕೆ ದೇಶದ ರಹಸ್ಯಗಳನ್ನು ಕೊಡುತ್ತಿದ್ದ ಭಾರತೀಯ ಯೋಧ…! Read More »

ಕೃತಕ ಹಲ್ಲು ನುಂಗಿ ಮಹಿಳೆ ಸಾವು

ಚೆನ್ನೈ: ಆಕಸ್ಮಿಕವಾಗಿ ನೀರಿನೊಂದಿಗೆ ಕೃತಕ ಹಲ್ಲನ್ನು ನುಂಗಿದ ಮಹಿಳೆ ಮೃತಪಟ್ಟಿರುವ ಘಟನೆ ಜುಲೈ 4 ರಂದು ಚೆನ್ನೈನಲ್ಲಿ ನಡೆದಿದ್ದು. ವಲಸರವಕ್ಕಂನ 43 ವರ್ಷದ ಮಹಿಳೆ ರಾಜಲಕ್ಷ್ಮಿ ಎಂಬವರು ಮೃತಪಟ್ಟವರು. ಇವರು ನೀರು ಕುಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೃತಕ ಹಲ್ಲನ್ನು ನುಂಗಿದ್ದಾರೆ. ಆ ಬಳಿಕ ಮಹಿಳೆಗೆ ತಲೆತಿರುಗುವಿಕೆ ಮತ್ತು ವಾಂತಿ ಉಂಟಾಗಿತ್ತು. ಬಳಿಕ ವೈದ್ಯರು ಆಕೆಯನ್ನು ಪರೀಕ್ಷಿಸಿ ಬಿಡುಗಡೆ ಮಾಡಿದ್ದರು. ಮರುದಿನ, ಪರೀಕ್ಷಿಸಿಸಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ನಿಧನರಾದರು. ಶವಪರೀಕ್ಷೆ ನಡೆಸಿ ದೇಹವನ್ನು ಬಿಟ್ಟುಕೊಡಲಾಗಿದೆ. ಕ್ರಿಮಿನಲ್ ಪ್ರೊಸಿಜರ್ನ ಕೋಡ್ನ

ಕೃತಕ ಹಲ್ಲು ನುಂಗಿ ಮಹಿಳೆ ಸಾವು Read More »

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್

ನವೆದಹಲಿ : ಪ್ರಸ್ತುತ ರಾಜ್ಯಸಭೆಯ ಉಪ ಮಹಡಿ ನಾಯಕರಾಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಸಭೆಯ ಸದನದ ನಾಯಕರಾಗಲಿದ್ದಾರೆ. ಸಧ್ಯ ಕರ್ನಾಟಕದ ರಾಜ್ಯಪಾಲರಾಗಿರುವ ಹಿರಿಯ ನಾಯಕ ಥಾವರ್ ಚಂದ್ ಗೆಹ್ಲೋಟ್ ಅವರ ರಾಜೀನಾಮೆಯ ನಂತರ ತೆರವಾದ ಸ್ಥಾನವನ್ನ ಗೋಯಲ್ ಅಲಂಕರಿಸಲಿದ್ದಾರೆ. ಹಿರಿಯ ಸಂಸದೀಯ ನಾಯಕರಾಗಿರುವ ಗೋಯಲ್ ಅವರು ತ್ರಿವಳಿ ತಲಾಖ್ ಮತ್ತು ಅನುಚ್ಛೇದ 370 ರಂತಹ ನಿರ್ಣಾಯಕ ಮಸೂದೆಗಳನ್ನು ಅಂಗೀಕರಿಸುವ ಸಮಯದಲ್ಲಿ ಸೇರಿದಂತೆ ಪರಿಣಾಮಕಾರಿ ಸನ್ನಿವೇಶಗಳಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದಾರೆ.ಮಹಾರಾಷ್ಟ್ರ ಮೂಲದ

ರಾಜ್ಯಸಭೆಯ ಸದನ ನಾಯಕರಾಗಿ ಪಿಯೂಷ್ ಗೋಯಲ್ Read More »

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದು ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿದ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ. ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದೆ ಸೇತುವೆ ಮೇಲೆ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ದುಸ್ಸಾಹಸಕ್ಕೆ ಕೈಹಾಕಿದ ಎಂಎಸ್ಆರ್’ಟಿಸಿ ಬಸ್ ಚಾಲಕ ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ. ನದಿ ದಾಟುತ್ತಿದ್ದಂತೆ ಬಸ್ ಹಡಗಿನಂತೆ ಕಂಡುಬಂದಿದೆ.

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು Read More »