ರಾಷ್ಟ್ರೀಯ

‘ನೀವು ನಮ್ಮ ಮನ್ ಕಿ ಬಾತ್ ಯಾಕೆ ಕೇಳ್ತಿಲ್ಲ?’ | ಬಿಜೆಪಿ ಸಂಸದನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಕುಸ್ತಿಪಟುಗಳಿಂದ ಪ್ರಧಾನಿ ಮೋದಿಗೆ ಪ್ರಶ್ನೆ

ಸಮಗ್ರ ನ್ಯೂಸ್: ಮಹಿಳಾ ಕುಸ್ತಿಪಟುಗಳಿಗೆ ಬಿಜೆಪಿ ಸಂಸದ ನೀಡಿದ ಲೈಂಗಿಕ ಕಿರುಕುಳದ ವಿರುದ್ಧ ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ದೇಶದ ಖ್ಯಾತ ಕುಸ್ತಿಪಟುಗಳು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳನ್ನು ಕೇಳಿದ್ದು, ನೀವು ನಮ್ಮ ‘ಮನ್ ಕಿ ಬಾತ್’ ಅನ್ನು ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸಂಸದ ಮತ್ತು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಬಳಿ ಸಮಯಾವಕಾಶವನ್ನು ಕೇಳಿರುವ ಕುಸ್ತಿಪಟುಗಳು ತಮಗೆ ನ್ಯಾಯ ಸಿಗುವವರೆಗೆ […]

‘ನೀವು ನಮ್ಮ ಮನ್ ಕಿ ಬಾತ್ ಯಾಕೆ ಕೇಳ್ತಿಲ್ಲ?’ | ಬಿಜೆಪಿ ಸಂಸದನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಕುಸ್ತಿಪಟುಗಳಿಂದ ಪ್ರಧಾನಿ ಮೋದಿಗೆ ಪ್ರಶ್ನೆ Read More »

ಛತ್ತೀಸ್ ಗಡದಲ್ಲಿ ನಕ್ಸಲರ ಅಟ್ಟಹಾಸ| 11 ಯೋಧರು ಹುತಾತ್ಮ

ಸಮಗ್ರ ನ್ಯೂಸ್: ದಾಂತೇವಾಡದಲ್ಲಿ ಅರನಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಂತೇವಾಡದಲ್ಲಿ ನಕ್ಸಲರು ಸುಧಾರಿತ ಸ್ಪೋಟಕ ಬಳಸಿ ದುಷ್ಕೃತ್ಯ ನಡೆಸಿದ್ದಾರೆ. ನಕ್ಸಲರು ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನೆಲ ಬಾಂಬ್ ಮೂಲಕ ಸ್ಪೋಟಿಸಿದ್ದಾರೆ. ನಕ್ಸಲರ ಸುಧಾರಿತ ಸ್ಪೋಟಕದಲ್ಲಿ ಡಿಆರ್ ಜಿ ಸಿಬ್ಬಂದಿ ವಾಹನದ ಚಾಲಕ, 10 ಯೋಧರು ಹುತಾತ್ಮರಾಗಿದ್ದಾರೆ. ಎಡಪಂಥೀಯ ಉಗ್ರವಾದದ ಕೇಂದ್ರವಾಗಿರುವ ಬಸ್ತಾರ್’ನಲ್ಲಿ ಬಂಡುಕೋರರ ವಿರುದ್ಧ ಹಲವಾರು ಯಶಸ್ವಿ ಕಾರ್ಯಾಚರಣೆಗಳಲ್ಲಿ ಡಿಆರ್ಜಿ ಪ್ರಮುಖ ಪಾತ್ರ ವಹಿಸಿದೆ. ದಾಳಿ

ಛತ್ತೀಸ್ ಗಡದಲ್ಲಿ ನಕ್ಸಲರ ಅಟ್ಟಹಾಸ| 11 ಯೋಧರು ಹುತಾತ್ಮ Read More »

ಮಧ್ಯಾಹ್ನವೇ ಕತ್ತಲೆಯಲ್ಲಿ ಮುಳುಗಿದ ಕಾನ್ಪುರ!!

ಸಮಗ್ರ ನ್ಯೂಸ್: ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ. ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ. ನಗರದ ಈ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ

ಮಧ್ಯಾಹ್ನವೇ ಕತ್ತಲೆಯಲ್ಲಿ ಮುಳುಗಿದ ಕಾನ್ಪುರ!! Read More »

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ| ಎರಡು ದಿನ ಶೋಕಾಚರಣೆ

ಸಮಗ್ರ ನ್ಯೂಸ್: ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ (95) ಮಂಗಳವಾರ ರಾತ್ರಿ ವಿಧಿವಶರಾಗಿದ್ದು, ಅವರ ಗೌರವಾರ್ಥ ಕೇಂದ್ರ ಸರ್ಕಾರ 2 ದಿನ ಶೋಕಾಚರಣೆ ಘೋಷಣೆ ಮಾಡಿದೆ. ಕೆಲ ದಿನಗಳಿಂಗ ಅನಾರೋಗ್ಯದಿಂದ ಬಳಲುತ್ತಿದ್ದ ಬಾದಲ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಅವರನ್ನು ಒಂದು ವಾರದ ಹಿಂದೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಇಂದು ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ. ಅವರ

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ| ಎರಡು ದಿನ ಶೋಕಾಚರಣೆ Read More »

ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ

ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ Read More »

ಪುಟ್ಟ ಬಾಲಕಿಯ ಪಿಯಾನೋ ನುಡಿಸುವಿಕೆಗೆ ಮನಸೋತ ಮೋದಿ

ಸಮಗ್ರ ನ್ಯೂಸ್: ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದಾರೆ. ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ. ಆಕೆಯ ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಪಿಯಾನೋದಲ್ಲಿ ಅದೇ ಹಾಡನ್ನು ನುಡಿಸುವ ಮೂಲಕ ಲಕ್ಷಾಂತರ ಮಂದಿಯ ಶ್ಲಾಘನೆಗೆ

ಪುಟ್ಟ ಬಾಲಕಿಯ ಪಿಯಾನೋ ನುಡಿಸುವಿಕೆಗೆ ಮನಸೋತ ಮೋದಿ Read More »

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ

ಸಮಗ್ರ ನ್ಯೂಸ್: ಸ್ನೇಹಿತನ ಜೊತೆ ಗೋವಾಕ್ಕೆ ತೆರಳುತ್ತಿದ್ದ ಯುವಕನೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಪೆರಿಂಗಡಿಯಲ್ಲಿ ನಡೆದಿದೆ. ಪಾಲಕ್ಕಾಡ್ ನ ನಿವಾಸಿ ಸಾಬೀರ್(32) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋವಾಕ್ಕೆ ತಲಪಿದಾಗ ಸ್ನೇಹಿತನು ಸಾಬೀರ್ ನಾಪತ್ತೆಯಾಗಿದ್ದು , ಈ ಬಗ್ಗೆ ಸ್ನೇಹಿತನು ಗೋವಾ ಪೊಲೀಸರಿಗೆ ದೂರು ನೀಡಿದ್ದು, ಗೋವಾ ಪೊಲೀಸರು ಕೇರಳ ಮತ್ತು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂಬಳೆ ಪೊಲೀಸ್ ಠಾಣೆಯ ಪೆರಿಂಗಡಿಯ ರೈಲ್ವೆ ಹಳಿ ಬಳಿ ಮೃತದೇಹ

ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ Read More »

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು

ಡೆಹ್ರಾಡೂನ್: ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಹೆಲಿಪ್ಯಾಡ್‌ನಲ್ಲಿ ಸಂಭವಿಸಿದೆ. 2017 ರ ಬ್ಯಾಚ್ ರಾಜ್ಯ ಹಣಕಾಸು ಸೇವಾ ಅಧಿಕಾರಿ ಅಮಿತ್ ಸೈನಿ ಮೃತ ಅಧಿಕಾರಿ. ಅವರು ಏಪ್ರಿಲ್ 25 ರಂದು ಪ್ರಾರಂಭವಾಗುವ ಕೇದಾರನಾಥ ಯಾತ್ರೆಗೆ ಮುಂಚಿತವಾಗಿ ಆಡಿಟ್ ಮತ್ತು ತಪಾಸಣೆ ಸಂಬಂಧಿತ ಕೆಲಸಕ್ಕಾಗಿ ಭಾನುವಾರ ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಇತರ ಅಧಿಕಾರಿಗಳೊಂದಿಗೆ ತೆರಳಿದ್ದರು. ಕೆಲಸ ಮುಗಿದ ನಂತರ ಅಧಿಕಾರಿ ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ . ಕೆಸ್ಟ್ರೆಲ್

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು Read More »

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ

ಸಮಗ್ರ ನ್ಯೂಸ್: ಸೂರ್ಯ‌ ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಪ್ರಖರಗೊಳ್ಳಲಿದ್ದು ಹೆಚ್ಚು ಬಿಸಿಲಿನ ತಾಪಮಾನ ಅಂತೆಯೇ ಬಿಸಿಗಾಳಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ. ಸೂರ್ಯನು 11 ವರ್ಷಗಳ ಆವರ್ತನೆಯ ಉತ್ತುಂಗ ಮಟ್ಟವನ್ನು ತಲುಪುವ ಸಮಯದಲ್ಲಿ ಇನ್ನಷ್ಟು ಪ್ರಖರಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.‌‌ ಆದ್ದರಿಂದ ಮುಂದಿನ ಎರಡ್ಮೂರು ದಿ‌ನ ಮನೆಯಿಂದ ಹೊರಗೆ ಬರೋದನ್ನು ಆದಷ್ಟು ತಪ್ಪಿಸುವುದು ಒಳಿತು ಎಂದು ನಾಸಾ ತಿಳಿಸಿದೆ. ಸೌರ ಬಿರುಗಾಳಿಯ ಆರಂಭದ ಹೊಡೆತವು ಏಪ್ರಿಲ್ 24 ರಂದು ಭೂಮಿಯನ್ನು

ಹೊತ್ತಿ ಉರಿಯಲಿದ್ದಾನೆ ಸೂರ್ಯ| ಆದಷ್ಟೂ ಮನೆಯೊಳಗೆ ಇರಲು ನಾಸಾ ಸೂಚನೆ Read More »

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು

ಸಮಗ್ರ ನ್ಯೂಸ್: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸರ್ಕಾರ ತಂದ ಒಟ್ಟು 20 ಚೀತಾಗಳ ಪೈಕಿ ಒಂದು ಚೀತಾ ಈಗಾಗಲೇ ಸಾವನ್ನಪ್ಪಿದ್ದು ಇದೀಗ ಮತ್ತೊಂದು ಚೀತಾ ಕೂಡಾ ಸಾವನ್ನಪ್ಪಿದೆ.‌ ಮೃತ ಪಟ್ಟಿರುವ ಚಿರತೆ ‘ಉದಯ್’ಗೆ ಆರು ವರ್ಷ ವಯಸ್ಸಾಗಿತ್ತು. ಇದಕ್ಕೂ ಮುನ್ನ ನಮೀಬಿಯಾದ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು. ಬೆಳಿಗ್ಗೆ ತಪಾಸಣೆಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ ತಲೆ ತಗ್ಗಿಸಿ ಮಂಕಾಗಿರುವುದು ಕಂಡುಬಂದಿತು. ನಂತ್ರ ಹಾಜರಾದ ಪಶುವೈದ್ಯರು, ಹಿರಿಯ ಅಧಿಕಾರಿಗಳಿಗೆ

ನಮೀಬಿಯಾದಿಂದ ತಂದ ಮತ್ತೊಂದು ಚೀತಾ ‌ಸಾವು Read More »