ಕ್ರೈಂ

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್

ತೆಲಂಗಾಣ: ಅಸಾದ್ಯ ರೀತಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸುವ ಸಾಹಸ ಮಾಡಲು ಹೋಗಿ ಹಿಂಬದಿ ಸವಾರನ ಸಾವಿಗೆ ಬೈಕ್ ಸವಾರನೇ ಕಾರಣನಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಂಚೇರಿಯಲ್ ಜಿಲ್ಲೆಯ ತಪುರ್ ಚೆಕ್ ಪೋಸ್ಟ್ ನಲ್ಲಿ ಘಟನೆಯು ಮೇ 22 ರ ಮಧ್ಯಾಹ್ನ 12.53 ರ ವೇಳೆಗೆ ನಡೆದಿದ್ದು , ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಸೆರೆಯಾಗಿರುವ ವೀಡಿಯೋದಲ್ಲಿ ಯುವಕರಿಬ್ಬರು ಅತಿ ವೇಗವಾಗಿ ಬಂದಿದ್ದು, ಈ ಸಂದರ್ಭ ಚೆಕ್ ಪೋಸ್ಟ್ […]

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್ Read More »

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು

ಕಡಬ: ಕಬ್ಬಿಣದ ಸಲಾಕೆ ಸಹಾಯದಿಂದ ಮರದಿಂದ ತೆಂಗಿನಕಾಯಿ ಕೇಳುತ್ತಿದ್ದಾಗ ಸಲಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಡಬೆಟ್ಟು ಎಂಬಲ್ಲಿ ನಡೆದಿದೆ. ಕುಟ್ರುಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ 35 ವರ್ಷದ ಲಿಜು ಮೃತಪಟ್ಟ ದುರ್ದೈವಿ. ಲಿಜು ತನ್ನ ಮನೆಯಲ್ಲಿ ಇಂದು ಬೆಳಿಗ್ಗೆ  ತೆಂಗಿನಕಾಯಿ ಕೀಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು Read More »

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ

ಸುಳ್ಯ: ಕೊರೊನಾ ಮಾರ್ಗ ಸೂಚಿ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಜೂಜಾಟ ಆಡುತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸೇರಿದಂತೆ 10 ಮಂದಿಯನ್ನು ಸುಳ್ಯ ಪೊಲೀಸ್ ಬಂಧಿಸಿದ ಘಟನೆ ನೆಡೆದಿದೆ. ಮಾಜಿ ಜಿ.ಪಂ.ಸದಸ್ಯ, ಬಿ.ಜೆ.ಪಿ ಕಾರ್ಯಕರ್ತ ಗಂಗಾಧರ ಕೇಪಳಕಜೆ ಸಹಿತ, ಗೋಪಾಲಕೃಷ್ಣ, ಗಂಗಾಧರಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್ , ಮೋಹನ್ ದಾಸ್, ಅಶೋಕ, ದಯಾನಂದ ಬಂಧಿತ ಆರೋಪಿಗಳು. ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತು ನಿರತ ಸುಳ್ಯ

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ Read More »

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು

ಮೂಡಿಗೆರೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕನೋರ್ವನಿಗೆ ತಲೆಕೆಳಗಾಗಿ ಕಟ್ಟಿಹಾಕಿ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ. ಮೇ10ರಂದು ಪುನೀತ್ ಎಂಬವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಈ ಘಟನೆ ನಡೆದಿತ್ತು. ನಂತರ ಪಿಎಸ್ ಐ ಅರ್ಜುನ್ ಅವರ ಈ ಅಮಾನವೀಯ ವರ್ತನೆ ತಿಳಿಯುತ್ತಿದ್ದಂತೆ ಹಲವೆಡೆ ಪಿಎಸೈ ಅಮಾನತಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಅದರಂತೆ ಅರ್ಜುನ್ ಅವರನ್ನು ಪಶ್ಚಿಮ ವಲಯ ಐಜಿಪಿ ನಿನ್ನೆ ಸೇವೆಯಿಂದ ಅಮಾನತುಗೊಳಿಸಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು Read More »

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ

ಮಂಗಳೂರು.ಮೇ23:‌ ಇಲ್ಲಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದಕಾರು ಅಪಘಾತದಲ್ಲಿ ಮೃತಪಟ್ಟಿದೆ. ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದ್ದಾರೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾರಿನಲ್ಲಿ ದಮ್ಮಾಮ್ ಗೆ ತೆರಳಿತ್ತು. ಕೆಲಸ ಮುಗಿಸಿ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ Read More »

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ..

ಹಾಸನ.ಮೇ23: ಎರಡು ವಾರದ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಒಬ್ಬನ ತಲೆಯನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯ ನಿವಾಸಿ ಭರತ್ ಎಂಬುವನೇ ಕೊಲೆಯಾದ ಯುವಕ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮಚ್ಚಿನಿಂದ ಕೊಚ್ಚಿರುವ ಹಂತಕರು ತಲೆಯನ್ನು ಎರಡು ಹೋಳು ಮಾಡಿದ್ದಾರೆ ಎನ್ನಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೂರ್ವದ್ವೇಷದಿಂದಲೇ‌

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ.. Read More »

ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾಯ್ತು ಬರೋಬ್ಬರಿ 4.9 ಕೆ.ಜಿ. ಚಿನ್ನ…! ಮಾರ್ಗ ಮದ್ಯೆ ಬಂಗಾರ ದೋಚಿದರಾ “ಕಳ್ಳ-ಪೊಲೀಸರು”…!?

ಬೆಳಗಾವಿ: ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾದ ಬರೋಬ್ಬರಿ 4.9 ಕೆಜಿ ಚಿನ್ನವನ್ನು ಬೆಳಗಾವಿ ಪೊಲೀಸರು ದೋಚಿದ ಘಟನೆ ನಾಲ್ಕು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ಸಿಐಡಿ ತನಿಖೆಗಾಗಿ ಮುನ್ನೆಲೆಗೆ ಬರುತ್ತಿದೆ. ಜನವರಿ 9 ರಂದು ಮಂಗಳೂರಿನ ತಿಲಕ್ ಪೂಜಾರಿ ಎಂಬಾತ ಬೆಳಗಾವಿ ಜಿಲ್ಲೆಯ ಕೊಲ್ಲಾಪುರಕ್ಕೆ ತನ್ನ ಸಹಚರರ ನೆರವಿನಿಂದ ಕಾರಿನಲ್ಲಿ 4.9 ಕೆಜಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ತಿಲಕ್ ಗೆಳೆಯ, ಧಾರವಾಡ ಮೂಲದ ಕಿರಣ್ ವೀರನಗೌಡ ಎಂಬಾತ ಬೆಳಗಾವಿ ಡಿವೈಎಸ್ಪಿಗೆ ಮಾಹಿತಿ ನೀಡಿದ್ದಾನೆ. ಖಚಿತ

ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾಯ್ತು ಬರೋಬ್ಬರಿ 4.9 ಕೆ.ಜಿ. ಚಿನ್ನ…! ಮಾರ್ಗ ಮದ್ಯೆ ಬಂಗಾರ ದೋಚಿದರಾ “ಕಳ್ಳ-ಪೊಲೀಸರು”…!? Read More »

ಸಹಿಸಲಾರದ ಉದರ ನೋವು ಬಾಧೆ ತಡೆಯಲಾರದೆ ಶಿಕ್ಷಕಿ ಮಾಡಿದ್ದೇನು?.

ಕೊಳ್ಳೇಗಾಲ: ತೀವ್ರ ಹೊಟ್ಟೆನೋವಿನ ಬಾಧೆಯಿಂದ  ಬೇಸತ್ತ ಶಿಕ್ಷಕಿಯೊಬ್ಬರು ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ನಡೆದಿದೆ.  ಪಟ್ಟಣದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯ ಜೀವನ ದುರಂತ ಅಂತ್ಯವಾಗಿದೆ. ತಾಲೂಕಿನ ಸಿಂಗನಲ್ಲೂರು ಗ್ರಾಮದ 28 ವರ್ಷ ವಯಸ್ಸಿನ ರಮ್ಯಾ ಅವರು ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.  ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಹೊಟ್ಟೆ ನೋವು ತೀವ್ರವಾಗಿದ್ದು, ಸಹಿಸಿಕೊಳ್ಳಲು ಸಾಧ್ಯವಾಗದ ವೇದನೆಯಿಂದ ಬೇಸತ್ತ ಅವರು

ಸಹಿಸಲಾರದ ಉದರ ನೋವು ಬಾಧೆ ತಡೆಯಲಾರದೆ ಶಿಕ್ಷಕಿ ಮಾಡಿದ್ದೇನು?. Read More »

ಹಣದಾಸೆಯಿಂದ‌ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು!

ಬೆಂಗಳೂರು : ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಉದ್ದೇಶದಿಂದ 4 ಜನ ಸ್ನೇಹಿತರು, ಏಟಿಎಂಗೆ ಹಣ ತುಂಬಾವ ವಾಹನದಿಂದಲೇ ಕಳವು ಮಾಡಿ, ಇನ್ನೇನೂ ಹಣ್ಣ ಕದ್ದ ತಮ್ಮ ಸಹಚರ ಸಿಕ್ಕಿಹಾಕುತ್ತಾನೆ ಎನ್ನುವ ವೇಳೆ ಕೊಲೆ ಮಾಡಿ ಜೈಲುಪಾಲಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.ಕೊಲೆಯಾದವನನ್ನು ಅಬ್ದುಲ್ ಎಂದು ಗುರುತಿಸಲಾಗಿದೆ.  ಮಹೇಶ್, ಮಧುಸೂದನ್, ಪ್ರಸನ್ನ, ಕುಮಾರ್ ಆರೋಪಿಗಳು.  ಜೀವನದಲ್ಲಿ ಹೇಗಾದ್ರು ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿ  ಜೀವನದ ತುಂಬೆಲ್ಲಾ ಹಾಯಾಗಿ  ಇರುವ ಯೋಜನೆಯಲ್ಲಿ ತೊಡಗಿದ್ದ ನಾಲ್ಕು ಮಂದಿ

ಹಣದಾಸೆಯಿಂದ‌ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು! Read More »

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು

ಚೆನ್ನೈ.ಮೇ22: ಇಂತದ್ದೊಂದು ದಿಗಿಲುಗೊಳ್ಳುವ ಆಫರ್ ಬಂದಿದ್ದು ತಮಿಳು ಚಿತ್ರರಂಗದ ಬಲು ಬೇಡಿಕೆಯ ನಟಿ ಹಾಗೂ ಗಾಯಕಿ ಸೌಂದರ್ಯ ನಂದಕುಮಾರ್ ರವರಿಗೆ.  ಗಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸೌಂದರ್ಯ ರಜನಿಕಾಂತ್ ನಟನೆಯ ಕಬಾಲಿ, ವಿಜಯ್ ಮಾಸ್ಟರ್ ನಟನೆಯ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದಾಕೆ.ಇತ್ತೀಚಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಸಿನಿಮಾರಂಗದ ವಿಚಾರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಸೌಂದರ್ಯಾ ಬಾಲ ನಂದಕುಮಾರ್ ಅವರಿಗೂ ಹೀಗೆಯೇ ಆಗಿದೆ. ಪ್ರಾಧ್ಯಾಪಕನೋರ್ವ ತಮ್ಮ ಜತೆ

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು Read More »