ಕೃಷಿ-ಕಾರ್ಯ

ಗಗನಕ್ಕೇರಿದ ಬೆಳ್ಳುಳ್ಳಿ ದರ| ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಅಳವಡಿಕೆ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ 600 ರೂ. ಗಡಿ ದಾಟಿದ್ದು, ಬೆಳ್ಳುಳ್ಳಿ ಬೆಲೆ ಹೆಚ್ಚಾದಂತೇ ಕೆಲವೆಡೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮಧ‍್ಯಪ್ರದೇಶದಲ್ಲಿ ಕೆಲವು ರೈತರು ತಮ್ಮ ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಹಾಕಿಸಿಕೊಂಡಿದ್ದಾರೆ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿಯನ್ನು ಬಿಡುವಂತೆಯೂ ಇಲ್ಲ, ಖರೀದಿಸುವಂತೆಯೂ ಇಲ್ಲ ಎಂಬ ಸ್ಥಿತಿ ಗ್ರಾಹಕರದ್ದಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬೆಳ್ಳುಳ್ಳಿಗೆ ಈ ಮಟ್ಟಿಗೆ ಬೆಲೆ ಏರಿಕೆಯಾಗಿದ್ದ ಉದಾಹರಣೆಯೇ ಇಲ್ಲ. ಇದೀಗ ಬೆಳ್ಳುಳ್ಳಿಗೆ ಬೆಲೆ ಬಂದಿರುವುದರಿಂದ ರೈತರೂ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಕೆಲವು […]

ಗಗನಕ್ಕೇರಿದ ಬೆಳ್ಳುಳ್ಳಿ ದರ| ಬೆಳೆ ಕಾಯಲು ಸಿಸಿಟಿವಿ ಕ್ಯಾಮರಾ ಅಳವಡಿಕೆ Read More »

ರೈತರಲ್ಲಿ ಆತಂಕ ಮೂಡಿಸಿದ ಕಾಳುಮೆಣಸು ದರ ಕುಸಿತ…!

ಸಮಗ್ರ ನ್ಯೂಸ್: ಕಾಳು ಮೆಣಸನ್ನು ಕರಾವಳಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಸುವಂತಹ ಕೃಷಿ. ಹಲವು ಬಾರಿ ಅಡಿಕೆಗೆ ದರ ಕುಸಿತ ಕಂಡಂತೆ ಕಾಳು ಮೆಣಸಿನ ದರ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಈ ಎರಡು ಬೆಳೆಯ ದರವು ಕೊಂಚ ಕುಸಿತ ಕಂಡಿದೆ. ಒಂದು ವಾರದ ಹಿಂದೆ ಪ್ರತಿ ಕ್ವಿಂಟಲ್‌ಗೆ 60 ಸಾವಿರ ಅಸುಪಾಸಿನಲ್ಲಿದ್ದ ದರವು ಈಗ ₹54 ಸಾವಿರಕ್ಕೆ ಇಳಿಕೆಯಾಗಿದೆ. ಎರಡು ವರ್ಷಗಳಿಂದ ಸ್ಥಿರವಾಗಿದ್ದ ದರ ಹಂಗಾಮಿನ ಆರಂಭದಲ್ಲೇ ಇಳಿಮುಖವಾಗಿದೆ. ಇದರಿಂದ ಬೆಳೆಗಾರರಿಗೆ

ರೈತರಲ್ಲಿ ಆತಂಕ ಮೂಡಿಸಿದ ಕಾಳುಮೆಣಸು ದರ ಕುಸಿತ…! Read More »

5.6 ಕೋಟಿ ಸಸಿಗಳ ನಾಟಿ; ಈಶ್ವರ ಖಂಡ್ರೆ

ಸುಳ್ಯ, ಫೆ.5: ನಾನು ಸಚಿವನಾದ ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5 ಕೋಟಿ 6 ಲಕ್ಷ ಸಸಿಗಳನ್ನು ನಾಟಿ ಮಾಡಿದ್ದೇವೆ. ಈ ಮೂಲಕ ಹರಿಸು ವ್ಯಾಪ್ತಿ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪರಿಸರ, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಅವರು ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ಸಂದರ್ಶನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಸಸಿ ನಾಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಗಳು ಉಂಟಾಗದಂತೆ ಅದಕ್ಕೆ ಅಡಿಟ್ ಮಾಡಲು

5.6 ಕೋಟಿ ಸಸಿಗಳ ನಾಟಿ; ಈಶ್ವರ ಖಂಡ್ರೆ Read More »

ಫೆ.16ಕ್ಕೆ ಭಾರತ ಬಂದ್ ಗೆ ಕರೆ ಕೊಟ್ಟ ರೈತ ಸಂಘಟನೆಗಳು

ಸಮಗ್ರ ನ್ಯೂಸ್: ದೇಶದಾದ್ಯಂತ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ನೀಡುವಂತೆ ಹಾಗೂ ದೇಶದಲ್ಲಿರುವ ಕೆಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಫೆಬ್ರವರಿ 16ರಂದು ಭಾರತ್​ ಬಂದ್​ಗೆ ಕರೆ ನೀಡಿವೆ. ಇದರಂತೆ ಫೆಬ್ರವರಿ 16ರಂದು ಭಾರತ್​​ ಬಂದ್​​ಗೆ ರೈತ ಸಂಘಟನೆಗಳು ಕರೆ ನೀಡಿದು ಈ ಬಂದ್​ಗೆ ವ್ಯಾಪಾರಿ ಸಂಘಟನೆಗಳೊಂದಿಗೆ ಸಾರಿಗೆ ಸಂಘಟನೆಗಳು, ಜನರು ಬೆಂಬಲ ನೀಡಬೇಕು ಎಂದು ಭಾರತೀಯ ಕಿಸಾನ್​​ ಯೂನಿಯನ್​​ ರಾಷ್ಟ್ರೀಯ ಮುಖಂಡ ರಾಕೇಶ್​ ಟಿಕಾಯತ್ ಮನವಿ ಮಾಡಿದ್ದಾರೆ. ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ

ಫೆ.16ಕ್ಕೆ ಭಾರತ ಬಂದ್ ಗೆ ಕರೆ ಕೊಟ್ಟ ರೈತ ಸಂಘಟನೆಗಳು Read More »

ರೈತ ಬಾಂಧವರೇ ಗಮನಿಸಿ| ಡಿ.31ರೊಳಗೆ ಅರ್ಜಿ ಸಲ್ಲಿಸದಿದ್ರೆ ಈ ಯೋಜನೆ ಕಳೆದುಕೊಳ್ತೀರಿ…

ಸಮಗ್ರ ನ್ಯೂಸ್: ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್‌ 31 ಕೊನೆಯ ದಿನವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನದಡಿ ಒದಗಿಸಲಾಗುವ ಘಟಕಗಳು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲುಡೀಸೆಲ್ ಅಥವಾ ಸೋಲಾರ್ ಪಂಪ್‍ಸೆಟ್, ನೀರನ್ನು ಬೆಳೆಗೆ ಹಾಯಿಸಲು ಹನಿ, ತುಂತುರು ನೀರಾವರಿ ಪರಿಕರಗಳ ವಿತರಣೆ ಮಾಡಲಾಗುತ್ತದೆ.

ರೈತ ಬಾಂಧವರೇ ಗಮನಿಸಿ| ಡಿ.31ರೊಳಗೆ ಅರ್ಜಿ ಸಲ್ಲಿಸದಿದ್ರೆ ಈ ಯೋಜನೆ ಕಳೆದುಕೊಳ್ತೀರಿ… Read More »

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ…!

ಸಮಗ್ರ ನ್ಯೂಸ್: ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಈ ಕುರಿತಂತೆ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನ ಜೆಡಿಎಸ್ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 300 ರೂಪಾಯಿ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಕ್ರಮವನ್ನ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಸ್ವಾಗತಿಸಿದ್ದು, Xನಲ್ಲಿ ಪೋಸ್ಟ್ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಕೊಬ್ಬರಿ ಬೆಲೆ ಹೆಚ್ಚಳಕ್ಕೆ

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ…! Read More »

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ! 400 ರೂ ದಾಟಿದ ದಾರಣೆ

ಸಮಗ್ರ ನ್ಯೂಸ್: ಡಿ.12, ಇದೀಗ ಈರುಳ್ಳಿ ಜೊತೆ ಬೆಳ್ಳುಳ್ಳಿ ಬೆಲೆಯೂ ಗಗನಕ್ಕೆರಿದೆ. ನಾಟಿ ಬೆಳ್ಳುಳ್ಳಿ ಬೆಲೆ 1 ಕೆಜಿಗೆ 400 ಇದ್ದರೆ ಹೈಬ್ರಿಡ್ ಬೆಳ್ಳುಳ್ಳಿ ಬೆಲೆ 300 ರೂಪಾಯಿ ಇದೆ. ಎರಡು ದಿನಗಳ ಹಿಂದೆ ಬೆಳ್ಳುಳ್ಳಿ ದರ 260 ಇದೀಗ ಒಂದೇ ಸಮನೆ 400ರ ಗಡಿ ದಾಟಿದೆ. ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಪೂರೈಕೆ ಕಡಿಮೆಯಾಗಿರುವುದೇ ದರ ಹೆಚ್ಚಳಕ್ಕೆ ಮೂಲ

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ! 400 ರೂ ದಾಟಿದ ದಾರಣೆ Read More »

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ

ಸಮಗ್ರ ನ್ಯೂಸ್: ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ ಅದರಲ್ಲೂ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆದು ಫಸಲು ಕಾಣುವ ಮೂಲಕ ಸಂಪಾಜೆಯ ಕೃಷಿಕರೋರ್ವರು ಹೊಸ ಭರವಸೆ ಮೂಡಿಸಿದ್ದಾರೆ. ಇಲ್ಲಿನ ಜೇಡ್ಲದ ನಿವಾಸಿ ಕೃಷಿಕ ಶ್ರೀಧರ ಭಟ್ ಹಲವು ಆವಿಷ್ಕಾರಗಳ ಬಳಿಕ ಅಡಿಕೆ ಕೃಷಿಯಲ್ಲಿ ಯಶ ಕಂಡಿದ್ದಾರೆ. ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ ಅನೇಕ

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ Read More »

ಟೊಮ್ಯಾಟೊ ದರದಲ್ಲಿ ಭಾರೀ ಕುಸಿತ| ಕೆಂಪುಸುಂದರಿ ಬೆಲೆ ಎಷ್ಟು ಗೊತ್ತಾ?

ಸಮಗ್ರ ನ್ಯೂಸ್: ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ. ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೋ ಪೂರೈಕೆಯಾಗುತ್ತಿದೆ. ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್‌ ಮಾರುಕಟ್ಟೆಯಲ್ಲಿ 15 ಕೇಜಿ ನಾಟಿ ಟೊಮೆಟೋ ಬಾಕ್ಸ್‌ 250- 400, ಹೈಬ್ರಿಡ್‌ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ

ಟೊಮ್ಯಾಟೊ ದರದಲ್ಲಿ ಭಾರೀ ಕುಸಿತ| ಕೆಂಪುಸುಂದರಿ ಬೆಲೆ ಎಷ್ಟು ಗೊತ್ತಾ? Read More »

ಭತ್ತದ ಬೆಳೆಗೆ ವಿಮೆಗೆ ಅರ್ಜಿ ಆಹ್ವಾನ|ಆಗಸ್ಟ್ 16 ಕೊನೆ ದಿನ

ಸಮಗ್ರ ನ್ಯೂಸ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಅಧಿಸೂಚನೆ ಆಗಿರುತ್ತದೆ. ಯೋಜನೆಯಡಿಯಲ್ಲಿ ಭತ್ತದ ಬೆಳೆಗೆ ವಿಮೆ ನೋಂದಣಿ ಆರಂಭಗೊಂಡಿದೆ. ಆಸಕ್ತ ಭತ್ತ ಬೆಳೆಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಗಿಂತ ಕಡಿಮೆ ಮಳೆ ಬೀಳುತ್ತಿದ್ದು ಹಾಗೂ ಈಗಿನ ಪ್ರಕೃತಿ ವಿಕೋಪಗಳು ಹೆಚ್ಚಾಗಿದ್ದು, ಭತ್ತದ ಬೆಳೆಗೆ ವಿಮೆ ಮಾಡಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ರೈತರು ಈ ಕೂಡಲೇ ಹತ್ತಿರದ ಸಹಕಾರಿ ಬ್ಯಾಂಕ್ ಅಥವಾ ಸಾಮಾನ್ಯ ಸೇವಾಕೇಂದ್ರಗಳನ್ನು

ಭತ್ತದ ಬೆಳೆಗೆ ವಿಮೆಗೆ ಅರ್ಜಿ ಆಹ್ವಾನ|ಆಗಸ್ಟ್ 16 ಕೊನೆ ದಿನ Read More »