ಮಹಾತ್ಮ ಗಾಂಧಿಯನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡ್ತೇವಾ?, ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿಗಿಂತ ಕೀಳು- ಕಿಡಿಕಾರಿದ ಹಿಂದೂ ಮಹಾ ಸಭಾ
ಮಂಗಳೂರು: ಹಿಂದೂ ವಿರೋಧಿಯಾಗಿದ್ದರೂ ಎಂಬ ಕಾರಣಕ್ಕೆ ಗಾಂಧೀಜಿಯನ್ನೆ ಬಿಟ್ಟಿಲ್ಲ , ಇನ್ನು ನಿಮ್ಮನ್ನು ಬಿಡುತ್ತೇವೆಯೇ? ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇವಸ್ಥಾನ ಒಡೆದ ಬಿಜೆಪಿ ಸರಕಾರ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ. ಹಿಂದೂ ವಿರೋಧಿಯಾಗಿದ್ದರೂ ಎಂಬ ಕಾರಣಕ್ಕೆ ಗಾಂಧೀಜಿಯನ್ನೆ ಬಿಟ್ಟಿಲ್ಲ ನಾವು. ಅವರನ್ನು ಹತ್ಯೆ ಮಾಡಲಾಯಿತು. ಇನ್ನು ನಿಮ್ಮನ್ನು ಬಿಡುತ್ತೇವಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸರಕಾರಕ್ಕೆ ನೈತಿಕತೆ […]










