ಶಾಸಕರು ಸಚಿವರಾದ್ರೂ ಹೊಳೆ ಈಜೋದು ತಪ್ಪಲಿಲ್ಲ | ಅಂಗಾರರ ಊರಲ್ಲಿ ಜೀವ ಅಂಗೈಯಲ್ಲಿ….! | ಮರಸಂಕದಲ್ಲಿ ಸೇತುವೆ ನಿರ್ಮಾಣ ಯಾವಾಗ…?
ಸುಳ್ಯ: ಈ ಊರಿನ ಹೆಸರು ಮರಸಂಕ. ತಾಲೂಕಿನ ಜಾಲ್ಸೂರು ಗ್ರಾಮಕ್ಕೆ ಒಳಪಡುವ ಈ ಊರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವೇ ಇಲ್ಲ. ಇದಕ್ಕೆ ಕಾರಣ ಊರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಹಳ್ಳ. ಊರಿನಿಂದ ಜಾಲ್ಸೂರು ಸಂಪರ್ಕಿಸುವ ದಾರಿಯಲ್ಲಿ ಹಳ್ಳವೊಂದಿದೆ. ಬೇಸಿಗೆಯಲ್ಲಿ ಕಷ್ಟವಿಲ್ಲದೆ ಇದನ್ನು ದಾಟಿ ಊರ ಜನ ಸಾಗುತ್ತಾರೆ. ಆದರೆ ಮಳೆಗಾಲದಲ್ಲೂ ಉಕ್ಕಿ ಬರುವ ನೀರಿನಲ್ಲೇ ಜೀವಭಯದಲ್ಲಿ ನದಿ ದಾಟುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು. ಇತ್ತೀಚೆಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಊರಿನ […]










