ಅಯೋಧ್ಯಗೆ ರವಾನೆಯಾಯ್ತು ಕಾರ್ಕಳದಿಂದ ಕೃಷ್ಣಶಿಲೆ| ಶ್ರೀರಾಮನ ಮೂರ್ತಿ‌ ಕೆತ್ತನೆಗೆ ಕರಾವಳಿಯ ಶಿಲೆ‌ ಬಳಕೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ.

Ad Widget ... ..

ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಆಯ್ಕೆಯಾಗಿದ್ದು, ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ಕರಾವಳಿಗರಿಗೆ ಹೆಮ್ಮೆಯಾಗಿದೆ.

Ad Widget

ಮಾ.17ರಂದು ಕಾರ್ಕಳದ ಈದುವಿನಿಂದ ಕೃಷ್ಣಶಿಲೆ‌ ಅಯೋಧ್ಯೆಗೆ ರವಾನೆಯಾಗಿದ್ದು, ನೂರಾರು ಭಕ್ತರು ಭಕ್ತಿಭಾವದಿಂದ ಶಿಲೆಯನ್ನು ಪೂಜಿಸಿ, ಬೀಳ್ಕೊಟ್ಟರು.

Leave a Comment

Your email address will not be published. Required fields are marked *