ಸಮಗ್ರ ನ್ಯೂಸ್: ಶತ್ರುಗಳು ಮತ್ತು ಅವರ ಆಕ್ರಮಣವನ್ನು ಬೆಂಬಲಿಸುವವರಿಗೆ ಮಾತ್ರ ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟಿದೆ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೋಮವಾರ ತಿಳಿಸಿದ್ದಾರೆ.
‘ಯುದ್ಧದಲ್ಲಿ ಭಾಗವಹಿಸದ ರಾಷ್ಟ್ರಗಳು ಇರಾನ್ ನ ಸಶಸ್ತ್ರ ಪಡೆಗಳ ಸಮನ್ವಯ ಮತ್ತು ಅನುಮತಿಯೊಂದಿಗೆ ಜಲಸಂಧಿಯ ಮೂಲಕ ತಮ್ಮ ಹಡಗುಗಳನ್ನು ಸಾಗಿಸಲು ಯಾವುದೇ ಅಡ್ಡಿಯಿಲ್ಲ’ ಎಂದವರು ಹೇಳಿದ್ದಾರೆ.
ಇರಾನ್ ಕದನ ವಿರಾಮವನ್ನು ಕೋರಿಲ್ಲ ಮತ್ತು ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಯುದ್ಧಕ್ಕೆ ನಿರ್ಣಾಯಕ ಅಂತ್ಯವನ್ನು ಬಯಸುತ್ತದೆ ಎಂದು ಅರಾಘ್ಚಿ ಹೇಳಿದ್ದಾರೆ ಎಂದು ವರದಿಯಾಗಿದೆ.







