ಇಂದು ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ| ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ರಾರಾಜಿಸಲಿದ್ದಾಳೆ ನಾಡದೇವಿ ಚಾಮುಂಡಿ

ಸಮಗ್ರ ನ್ಯೂಸ್: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂತಿಮ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿ ದಿನವಾದ ಅಕ್ಟೋಬರ್ 2ರ ಇಂದು ಭವ್ಯವಾಗಿ ಜರುಗಲಿದೆ. ಹನ್ನೊಂದು ದಿನಗಳ ನಾಡಹಬ್ಬಕ್ಕೆ ಇದರೊಂದಿಗೆ ತೆರೆ ಬೀಳಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಮಾರ್ಗವನ್ನು ಅಂದಗೊಳಿಸುವ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಭದ್ರತಾ ಸಿದ್ಧತೆಗಳನ್ನೂ ಪೊಲೀಸ್ ಇಲಾಖೆ ಕಟ್ಟುಕಥೆಯಂತೆ ಕೈಗೊಂಡಿದೆ.

Ad Widget ... ..

ಮಧ್ಯಾಹ್ನ 1.00ರಿಂದ 1.18ರೊಳಗಿನ ಶುಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ, ಸಂಜೆ 4.42ರಿಂದ 5.06ರೊಳಗೆ ಗಜರಾಜ ಅಭಿಮನ್ಯು ಹೊತ್ತಿರುವ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿನ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಈ ವೇಳೆ ರಾಜವಂಶಸ್ಥ ಯದುವೀರ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. 58 ಸ್ತಬ್ಧಚಿತ್ರಗಳು, ಜನಪದ ಕಲೆ, ವೀರಗಾಸೆ, ನಾದಸ್ವರ ಸೇರಿದಂತೆ ನೂರಾರು ಕಲಾ ತಂಡಗಳು ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿವೆ.

Ad Widget

ಕೊನೆಗೆ ಗಜರಾಜ ಅಭಿಮನ್ಯು ಸಂಗಾತಿ ಆನೆಗಳಾದ ಕಾವೇರಿ ಮತ್ತು ರೂಪಾ ಜೊತೆಗೆ ಐದು ಕಿಲೋಮೀಟರ್ ದೂರದ ಬನ್ನಿಮಂಟಪ ತಲುಪಲಿದ್ದಾನೆ. ಸಂಜೆ 7ಕ್ಕೆ ನಡೆಯುವ ಪಂಜಿನ ಕವಾಯತು ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸಲಿದ್ದು, ಸಿಎಂ ಹಾಗೂ ಸಚಿವ ಸಂಪುಟ ಸದಸ್ಯರು ಭಾಗವಹಿಸಲಿದ್ದಾರೆ. ಇದರೊಂದಿಗೆ ಈ ಬಾರಿಯ ದಸರಾ ಸಂಭ್ರಮಕ್ಕೆ ತೆರೆ ಬೀಳಲಿದೆ.

Leave a Comment

Your email address will not be published. Required fields are marked *