ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಭಾರೀ ಮಳೆ ಮುನ್ಸೂಚನೆ| ಕರಾವಳಿ‌ ಜಿಲ್ಲೆಗಳಿಗೆ ರೆಡ್ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Ad Widget ... ..

ದಾವಣಗೆರೆಗೆ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.

Ad Widget

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆಗುಂಬೆ, ಕಮ್ಮರಡಿ, ಗೇರುಸೊಪ್ಪ, ಶೃಂಗೇರಿ, ಸಿದ್ದಾಪುರ, ಕೊಪ್ಪ, ಧರ್ಮಸ್ಥಳ, ಭಾಗಮಂಡಲ, ಮೂಡುಬಿದಿರೆ, ಜಯಪುರ, ಬೆಳ್ತಂಗಡಿ, ಸುಳ್ಯ, ಮುನಿರಾಬಾದ್, ಲೋಂಡಾ, ಕಳಸ, ಕದ್ರಾ, ಸೋಮವಾರಪೇಟೆ, ಶಕ್ತಿನಗರ, ನಾಪೋಕ್ಲು, ಕೊಟ್ಟಿಗೆಹಾರ, ಖಾನಾಪುರ, ಹುಂಚದಕಟ್ಟೆ, ಬಂಟವಾಳ, ಯಲ್ಲಾಪುರ, ನೆಲೋಗಿ, ಮುಲ್ಕಿ, ಮಂಕಿ, ಮಾಣಿ, ಮಂಗಳೂರು, ಕಾರ್ಕಳ, ಜೇವರ್ಗಿ, ಹೊನ್ನಾವರ, ಬೆಳಗಾವಿ, ಬಾಳೆಹೊನ್ನೂರು, ಔರಾದ್, ಝಲ್ಕಿ, ಉಪ್ಪಿನಂಗಡಿ, ತ್ಯಾಗರ್ತಿ, ಸೇಡಬಾಳ, ಪುತ್ತೂರು, ನಿಪ್ಪಾಣಿ, ಎನ್‌ಆರ್‌ಪುರ, ಕುಮಟಾ, ಹಳಿಯಾಳ, ಬೀದರ್, ಸಿಂದಗಿ, ಶಿರಹಟ್ಟಿ, ಬೈಲಹೊಂಗಲ, ಯಲಬುರ್ಗಾ, ನರಗುಂದ, ಕುಂದಾಪುರ, ಕೋಟ, ಹುಕ್ಕೇರಿ, ಹಾರಂಗಿ, ಚಿತ್ತಾಪುರ, ಬಾದಾಮಿ, ಅಥಣಿ, ಅರಕಲಗೂಡು, ಅಂಕೋಲಾ, ಆನವಟ್ಟಿಯಲ್ಲಿ ಮಳೆ ದಾಖಲಾಗಿದೆ.

ಬಂಗಾಳಕೊಲ್ಲಿಯ ಚಂಡಮಾರುತದ ಪರಿಣಾಮದಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 19ರಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜನರು ಎಚ್ಚರಿಕೆಯಿಂದಿರಲು ಮತ್ತು ಸುರಕ್ಷಿತ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

Leave a Comment

Your email address will not be published. Required fields are marked *