ಸಮಗ್ರ ನ್ಯೂಸ್: ಅಹ್ಮದಾಬಾದ್ ವಿಮಾನ ದುರಂತದ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್ ದೇವ್ ಅವರು ಸಂಭಾವ್ಯ ವಿದೇಶಿ ಪಿತೂರಿಯ ಬಗ್ಗೆ ಆರೋಪಿಸಿದ್ದು,ಭಾರತದ ವಾಯುಯಾನ ಕ್ಷೇತ್ರದಲ್ಲಿ ವಿದೇಶಗಳ ಭಾಗಿಯಾಗುವಿಕೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪತನಗೊಂಡ ಏರ್ ಇಂಡಿಯಾ ವಿಮಾನದ ನಿರ್ವಹಣೆ ಮತ್ತು ಸುಸ್ಥಿತಿಯನ್ನು ತುರ್ಕಿಯಾದ ಕಂಪೆನಿಯೊಂದು ನೋಡಿಕೊಳ್ಳುತ್ತಿತ್ತು ಎಂಬ ಮಾಹಿತಿಯು ತನಗೆ ಲಭಿಸಿದೆ. ವಿಮಾನ ಅಪಘಾತವು ಸಂಪೂರ್ಣವಾಗಿ ಆಕಸ್ಮಿಕವಲ್ಲದಿರಬಹುದು ಎಂದರು.
ಭಾರತವು ವಾಯುಯಾನ ವಲಯದ ಮೇಲೆ ನಿಕಟ ನಿಗಾಯಿರಿಸಬೇಕಿದೆ. ಆ ಕಂಪೆನಿಯಿಂದ ಪಿತೂರಿಯ ಸಾಧ್ಯತೆಯಿದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ವಿದೇಶಿ ಕಂಪೆನಿಗಳ ಹಸ್ತಕ್ಷೇಪವನ್ನು ಭಾರತವು ನಿಲ್ಲಿಸಬೇಕು ಎಂದು ರಾಮ್ ದೇವ್ ಹೇಳಿದರು.
ತನ್ನ ಪ್ರತಿಪಾದನೆಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಪುರಾವೆಗಳನ್ನು ರಾಮ್ ದೇವ್ ಒದಗಿಸದಿದ್ದರೂ,ಅಹ್ಮದಾಬಾದ್ ದುರಂತದ ಬಳಿಕ ವಾಯುಯಾನ ಸುರಕ್ಷತೆ ಮತ್ತು ನಿರ್ವಹಣಾ ಶಿಷ್ಟಾಚಾರಗಳ ಹೆಚ್ಚುತ್ತಿರುವ ಪರಿಶೀಲನೆಯ ನಡುವೆ ಅವರ ಈ ಹೇಳಿಕೆಗಳು ಹೊರಬಿದ್ದಿವೆ.