ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ರಾಶಿಗಳ ಪ್ರಭಾವವು ಮಹತ್ವವಾದುದು. ದ್ವಾದಶ ರಾಶಿಗಳು ಈ ವಾರ ಯಾರಿಗೆ ಶುಭವನ್ನು ತರುತ್ತವೆ? ಯಾರಿಗೆ ಲಾಭ? ನೋಡೋಣ…ಬನ್ನಿ…

Ad Widget . Ad Widget . Ad Widget .

ಮೇಷರಾಶಿ:
ಸಂಕ್ರಮಣದಂದು ಸೂರ್ಯನು ಬುಧನ ಮನೆಯನ್ನು ಸೇರುತ್ತಾನೆ. ಯೋಗಕಾರಕರೂ ಆಗಿರುತ್ತಾರೆ. ಮಿಥುನ ರಾಶಿಯಲ್ಲಿ ಗುರುವಿರುವುದರಿಂದ ಮೇಷ ರಾಶಿಗೆ ಒಳ್ಳೆಯ ಫಲ ನೀಡುತ್ತಾರೆ, ಸೂರ್ಯಾಷ್ಟಕ ಪಾರಾಯಣ ಮಾಡಿ. ವಿಷ್ಣುವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದಲ್ಲಿ ಲಾಭದಲ್ಲಿ ಸೂರ್ಯೋದಯವಾಗುತ್ತದೆ. ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ ಆಲಸ್ಯವಾಗಲಿ, ಅನಾರೋಗ್ಯವಾಗಲಿ ಬಂದರೂ ತೊಂದರೆ ಎಂದು ನೆನೆಪಿನಲ್ಲಿರಲಿ.

Ad Widget . Ad Widget .

ವೃಷಭ ರಾಶಿ:
ವೃಷಭ ರಾಶ್ಯಾಧಿಪತಿ ಶುಕ್ರನು ರಾಶಿಯಲ್ಲೇ ಇರುವುದರಿಂದ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ವೃಥಾ ಖರ್ಚು ಜಾಸ್ತಿಯಾಗಿ ಪ್ರಯೋಜನಕಾರಿಯಾಗುವುದಿಲ್ಲ. ಬಿರುಗಾಳಿ ಬೀಸಿದರೂ ನಿಮ್ಮನ್ನು ನೀವು ದೈವಶಕ್ತಿಯಿಂದ ಕಾಪಾಡಿಕೊಳ್ಳುವ ಸಮಯವು ಬಂದಿದೆ. ಲಕ್ಷ್ಮೀ ನಾರಾಯಣನನ್ನು ಪೂಜಿಸಿ.

ಮಿಥುನ ರಾಶಿ:
ರವಿ, ಬುಧ, ಗುರು ಒಂದೇ ಮನೆಯಲ್ಲಿ ಇರುವುದರಿಂದ ರವಿ ಸಂಯೋಗದ ಫಲವು ಇರುತ್ತದೆ. ಯಾವ ಶುಭಫಲ ಇರಬೇಕಾದರೂ ಪೂರ್ವ ಪುಣ್ಯ, ದೈವೀ ಸಂಪತ್ತು ನಮ್ಮನ್ನು ಕಾಪಾಡಬೇಕು. ಈ ಸಮಯದಲ್ಲಿ ಸತ್ಯನಾರಾಯಣನನ್ನು ಪೂಜಿಸುವುದು ಅತ್ಯಂತ ಸೂಕ್ತವಾಗಿರುತ್ತದೆ.

ಕಟಕ ರಾಶಿ:
ಕಟಕ ರಾಶಿಯವರಿಗೆ ದ್ವಾದಶದಲ್ಲಿ ಮೂರು ಗ್ರಹಗಳು ಇರುವುದು, ದ್ವಿತೀಯದಲ್ಲಿ ಕುಜ -ಕೇತುವಿನಿಂದಾಗಿ ಕೆಲವು ಗೊಂದಲಗಳನ್ನು, ಮನಸ್ಸಿಗೆ ದುಃಖವನ್ನು ಉಂಟುಮಾಡುವ ಸಮಯವಾಗಿರುತ್ತದೆ. ದುಃಖ ದೂರವಾಗಲು ಪ್ರಸನ್ನ ದುರ್ಗೆಯನ್ನು ಪೂಜಿಸಿ. ಚಂದ್ರಾಧಿಪತ್ಯ ಇರುವುದರಿಂದ ಶಿವನನ್ನು ಅಭಿಷೇಕ, ಆರತಿಯಿಂದ ಪ್ರಸನ್ನಗೊಳಿಸಿದರೆ ಬೇಕಾದ್ದನ್ನು ಪಡೆಯಬಹುದು.

ಸಿಂಹ ರಾಶಿ:
ಎಲ್ಲಾದರೂ ಇರು, ಎಂತಾದರು ಇರು ಏನು ಬೇಕಾದರೂ ಮಾಡುವಂತಿರು. ಸೂರ್ಯನಿಗೆ ಸರಿಸಾಟಿಯಾದ ಬೆಳಕಿಲ್ಲ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತು ಅನ್ವಯಿಸುತ್ತದೆ. ದೈವವು ಬೆನ್ನ ಹಿಂದಿದೆ. ಕೇಳಿದ್ದನ್ನು ಪಡೆಯುವ ಕಾಲ. ಗಣಪತಿ ಹಾಗೂ ಷಣ್ಮುಖನನ್ನು ಪ್ರಾರ್ಥಿಸಲೇಬೇಕು.

ತುಲಾ ರಾಶಿ:
ಜನ್ಮಜನ್ಮಾಂತರಗಳ ಪುಣ್ಯದ ಸಂಗ್ರಹದಿಂದ ತಕ್ಕಡಿಯಲ್ಲಿ ತೂಗುವ ತುಲಾ ರಾಶಿಗೆ ವಿಶೇಷ ಫಲವನ್ನು ಕೊಡುವ ಭಗವಂತನೇ ಮುಂದೆ ನಿಂತಿರುವಾಗ, ನಿಮ್ಮ ಅಪೇಕ್ಷೆಯನ್ನು ಸಾಕಾರಗೊಳಿಸಿಕೊಳ್ಳುವ ಸಮಯವಾಗಿದೆ. ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ.ಲಕ್ಷ್ಮೀನಾರಾಯಣ ನನ್ನು ಸಾಯಂಕಾಲದಲ್ಲಿ ಕಲಶದಲ್ಲಿ ಆವಾಹನೆ ಮಾಡಿ ಪೂಜಿಸಿ.

ಕನ್ಯಾ ರಾಶಿ:
ಈ ಜಗತ್ತಿನಲ್ಲಿ ಹೆಣ್ಣು ಎಂಬ ಮಾಯೆ ಇಲ್ಲದಿದ್ದರೆ, ಲೋಕವೇ ಸೃಷ್ಟಿಯಾಗುತ್ತಿರಲಿಲ್ಲ. ಯಾವ ಜೀವ ರಾಶಿಯೂ ಇರುತ್ತಿರಲಿಲ್ಲ. ಜೀವಕ್ಕೆ ಸರಿಸಾಟಿಯಾದ ಉತ್ತರ ಹೆಣ್ಣಿನ ಜನನ ಶಕ್ತಿ. ಅಲ್ಲಿಗೆ ಕನ್ಯಾರಾಶಿಯವರು ಕಣ್ಣಲ್ಲಿ ಕಣ್ಣಿಟ್ಟು, ಫಲಾಪೇಕ್ಷೆ ಪಡೆಯಲು ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ.

ವೃಶ್ಚಿಕ ರಾಶಿ:
ರಾಶ್ಯಾಧಿಪತಿಯು ಜಗತ್ತಿನೊಡೆಯನಾದ ಷಣ್ಮುಖನೇ 12 ಕಣ್ಣುಗಳಿಂದ, 12 ಬಾಹುಗಳಿಂದ ಇಚ್ಛಾಶಕ್ತಿ, ಜ್ಞಾನಶಕ್ತಿಯನ್ನು ಕೊಡುವವನು. ಅನಂತವಾಗಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಶುಭ ಫಲವನ್ನು ಪಡೆಯಬಹುದು.

ಧನಸ್ಸು ರಾಶಿ:
ಯಾರ ಹಂಗೂ ಇಲ್ಲದೆ ನಮ್ಮೆಲ್ಲರನ್ನು ವಿನ್ಯಾಸ ಮಾಡಿದ ಸಾಕಾರ ಮೂರ್ತಿ ಭಗವಂತನೇ. ಆರೋಗ್ಯಕ್ಕಾಗಿ ಬೆಟ್ಟದ ನೆಲ್ಲಿಕಾಯಿ ತಿನ್ನಿರಿ. ನೇರಳೆ ಹಣ್ಣಿನ ರಸವನ್ನು ಸವಿಯಿರಿ. ಸಪ್ತಮ ಗುರುವಿನ ಅನುಗ್ರಹದಿಂದ ವಿಶೇಷವಾದ ಫಲಹೊಂದಿ, ನಿಮ್ಮ ಸಾಧನೆ ಎಲ್ಲರೂ ಮೆಚ್ಚುವಂತೆ ಕಾಲವೂ ಅತ್ಯುತ್ತಮವಾಗಿದೆ.

ಮಕರ ರಾಶಿ:
ಮಕರ ರಾಶಿ ದ್ವಿತೀಯದಲ್ಲಿ ರಾಹುವಿದ್ದಾನೆ. ಒಮ್ಮೊಮ್ಮೆ ದಿಕ್ಕುತೋಚದಂತೆ ಮಾಡುವುದು ರಾಹುಗ್ರಹವೇ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನಂತ ಪದ್ಮನಾಭನನ್ನು ಪೂಜಿಸುವ ಕಾಲವಿದು. ಶೇಷಾದಿ ನಾಗ ದೇವರನ್ನು ಪೂಜಿಸಿ ಇಷ್ಟಾರ್ಥವನ್ನು ಸಿದ್ದಿಸಿಕೊಳ್ಳಿ. ಆರೋಗ್ಯವನ್ನು ಕೊಟ್ಟು ಹರಸುತ್ತಾನೆ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಎರಡನೇ ಮನೆಯಲ್ಲಿ ಶನಿಯಿದ್ದು, ಮನೆಯಲ್ಲಿ ಎಲ್ಲರಿಗೂ ತೊಳಲಾಟ, ನಿಮ್ಮಿಂದ ಉಪಯೋಗ ಪಡೆದುಕೊಂಡ ನಿಮ್ಮವರೆಲ್ಲರೂ ನಿಮ್ಮ ಮೇಲೆ ತಿರುಗಿ ಬಿದ್ದು, ಶಾಂತತೆಯನ್ನು, ಚಿತ್ತವನ್ನು ಕದಲಿಸುತ್ತಾರೆ. ಶನಿ ಅಷ್ಟೋತ್ತರ ಪಠಿಸಿ, ಪ್ರತಿ ಶನಿವಾರದಂದು ಆಂಜನೇಯನನ್ನು ದರ್ಶಿಸಿ ಬನ್ನಿ.

ಮೀನ ರಾಶಿ:
ರಾಜ್ಯಾಧಿಪತಿಯು ಚತುರ್ಥದಲ್ಲಿ ಇದ್ದರೂ ಸ್ವಲ್ಪ ಮಟ್ಟಿಗೆ ನಿಮ್ಮನ್ನು ಕಾಪಾಡುತ್ತಾನೆ. ಗುರು ಅಷ್ಟೋತ್ತರ ಪಾರಾಯಣ ಮಾಡಿ. ಹುರಿಗಡಲೆ, ಕೊಬ್ಬರಿ, ಬೆಲ್ಲ ಅದಕ್ಕೆ ತಕ್ಕ ಹಾಗೆ ಕೇಸರಿ, ಏಲಕ್ಕಿ, ಲವಂಗ ಹಾಕಿದ ಭಕ್ಷ್ಯ ಗಣಪತಿಗೆ ಇಟ್ಟು ಪೂಜಿಸಿ, ಪ್ರಸಾದವನ್ನು ಸ್ವೀಕರಿಸಿ. ನಿಮ್ಮ ಇಚ್ಛೆ ಪೂರ್ಣಗೊಳ್ಳುತ್ತದೆ.

Leave a Comment

Your email address will not be published. Required fields are marked *