ಸಮಗ್ರ ನ್ಯೂಸ್; ಭಾರೀ ಮಳೆಯ ಹಿನ್ನೆಲೆ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮೇ.30ರ ಇಂದು ರಜೆ ಘೋಷಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಮಕ್ಕಳು ಸೇರಿದಂತೆ ಜನ ಸಾಮಾನ್ಯರು ನದಿ, ಹಳ್ಳ ಕೊಳ್ಳ ಸಮುದ್ರ ತೀರದತ್ತ ಹೋಗದಂತೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.