ಕೊಟ್ಟಿಗೆಹಾರ: ಅಬಕಾರಿ ಅಧಿಕಾರಿಗಳಿಂದ ಮೂಡಿಗೆರೆಯಲ್ಲಿ ದಾಳಿ – ಕಳ್ಳಭಟ್ಟಿ ವಶ

ಸಮಗ್ರ ನ್ಯೂಸ್: ಅಬಕಾರಿ ಇಲಾಖೆ ಅಧಿಕಾರಿಗಳು ಮೂಡಿಗೆರೆ ತಾಲ್ಲೂಕಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿಯನ್ನ ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

ಚಿಕ್ಕಮಗಳೂರು ಜಿಲ್ಲೆಯ ಅಬಕಾರಿ ಉಪ ಆಯುಕ್ತರು ರೂಪ ಎಂ, ಹಾಗೂ ಅಬಕಾರಿ ಅಧೀಕ್ಷಕರು ಸಂತೋಷ್ ಕುಮಾರ್ ಕೆ.ಜಿ.ಇವರ ನಿರ್ದೇಶನದಲ್ಲಿ , ಮೂಡಿಗೆರೆ ಉಪ ಅಧೀಕ್ಷಕರು ಎಂ.ಆರ್. ಶೇಖರ್ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

Ad Widget . Ad Widget .

ತಾಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಬಿನ್ ಈರಶೆಟ್ಟಿ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 30 ಲೀಟರ್ ಕಳ್ಳಭಟ್ಟಿ ತಯಾರಿಸುವ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ.

ಇದೆ ಸಂದರ್ಭದಲ್ಲಿ ಪುಟ್ಟಸ್ವಾಮಿ ಬಿನ್ ಲೇಟ್ ರಾಮ ಶೆಟ್ಟಿ ಅವರ ವಾಸದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 5 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ. ಸದರಿ ಇಬ್ಬರು ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ದಾಳಿ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ, ಪೃಥ್ವಿ ಬಿ.ಎಸ್., ಹಾಗೂ ಸಿಬ್ಬಂದಿಗಳಾದ ಶಿವಣ್ಣ, ರಮೇಶ್ ತುಳುಜಣ್ಣನವರ್, ಸುರೇಶ್ ಕಲ್ಯಾಡ್ರ, ರಮೇಶ್ ಹಾಗೂ ವಾಹನ ಚಾಲಕರಾದ ಅನೂಪ್ ಮತ್ತು ಪ್ರವೀಣ್ ಕುಮಾರ್ ಭಾಗಿಯಾಗಿದ್ದರು.

ಅಬಕಾರಿ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಹಾಗೂ ಅಕ್ರಮ ಮದ್ಯ ನಿಷೇಧಿಸಲು ಮುಂದಾಗಿದ್ದು, ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಚಿಕ್ಕಮಗಳೂರು ಜಿಲ್ಲೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *