January 2025

ಚಾರ್ಮಾಡಿ ಘಾಟ್: ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ಭಾರೀ ಕಾಳ್ಗಿಚ್ಚು

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಅರಣ್ಯಕ್ಕೆ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ರಸ್ತೆ ಬದಿ ಇದ್ದ ಬೆಂಕಿಯನ್ನಷ್ಟೇ ನಂದಿಸಲಾಗಿದ್ದು, ಗುಡ್ಡಕ್ಕೆ ಏರಿರುವ ಬೆಂಕಿ ನಂದಿಸಲು ಸಾಧ್ಯವಾಗದೆ ಪರದಾಡಿದರು. ಅಗ್ನಿಶಾಮಕ ಸಿಬ್ಬಂದಿ ಮಲ್ಲೇಶ್, ರಂಜಿತ್, ಮುತ್ತಪ್ಪ, ಅಶೋಕ್, ಮೋಹನ್‌ರಾಜ್ (ಚಾಲಕ) ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ 10 ಕಿ.ಲೋ ಮೀಟರ್ ದೂರಕ್ಕೂ ಕಾಣಿಸುತ್ತಿದೆ. ಸ್ಥಳೀಯರಲ್ಲಿ ಆತಂಕ […]

ಚಾರ್ಮಾಡಿ ಘಾಟ್: ಅಣ್ಣಪ್ಪ ಸ್ವಾಮಿ ದೇವಸ್ಥಾನ ಬಳಿ ಭಾರೀ ಕಾಳ್ಗಿಚ್ಚು Read More »

ಇಂದು ಬಾನಂಗಳದಲ್ಲಿ ನಡೆಯಲಿದೆ ವಿಸ್ಮಯ| ಇದನ್ನು ಮಿಸ್ ಮಾಡ್ಕೊಂಡ್ರೆ ಜೀವಮಾನದಲ್ಲಿ ಮತ್ತೆ ನೋಡಕ್ಕಾಗೋದಿಲ್ಲ!! ಗಣರಾಜ್ಯೋತ್ಸವಕ್ಕೆ ಗ್ರಹಗಳ ಪರೇಡ್

ಸಮಗ್ರ ನ್ಯೂಸ್: ಹೊಸ ವರ್ಷದ ಪ್ರಾರಂಭದಲ್ಲಿಯೇ ಅಂದರೆ ಜನವರಿ 25ರಂದು ಬಹಳ ಅಪರೂಪವಾದ ಖಗೋಳ ಘಟನೆಯೊಂದು ನಡೆಯಲಿದೆ. ಈ ದಿನ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರವನ್ನು ಮಾಡಲಿವೆ. ಈ ಅದ್ಭುತ ನೋಟವನ್ನು ನೀವು ಕೂಡ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶ ಪ್ರಿಯರಿಗೆ ಇಂದು ಹಬ್ಬವಾಗಲಿದೆ ಹಾಗೂ ಶುಕ್ರ, ಮಂಗಳ, ಗುರು, ಶನಿ, ನೆಪ್ಚೂನ್ ಮತ್ತು ಯುರೇನಸ್ ಎಂಬ ಆರು ಗ್ರಹಗಳ ಮೆರವಣಿಗೆ ಜನವರಿ 21 ರಿಂದ ಭಾರತದಲ್ಲಿ ಗೋಚರಿಸುತ್ತದೆ. ಗ್ರಹಗಳ

ಇಂದು ಬಾನಂಗಳದಲ್ಲಿ ನಡೆಯಲಿದೆ ವಿಸ್ಮಯ| ಇದನ್ನು ಮಿಸ್ ಮಾಡ್ಕೊಂಡ್ರೆ ಜೀವಮಾನದಲ್ಲಿ ಮತ್ತೆ ನೋಡಕ್ಕಾಗೋದಿಲ್ಲ!! ಗಣರಾಜ್ಯೋತ್ಸವಕ್ಕೆ ಗ್ರಹಗಳ ಪರೇಡ್ Read More »

ರೇಣುಕಾಚಾರ್ಯ ಕೊಲೆ ಪ್ರಕರಣ| ದರ್ಶನ್ ಮತ್ತು‌ ಗ್ಯಾಂಗ್ ಗೆ ಸುಪ್ರೀಂ ನೋಟೀಸ್

ಸಮಗ್ರ ನ್ಯೂಸ್: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ನಿಂದ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳು ರೆಗುಲರ್ ಪಡೆದುಕೊಂಡು ಬಿಡುಗಡೆಯಾಗಿದ್ದರು. ಆದರೆ ರಾಜ್ಯ ಸರ್ಕಾರ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ 7 ಆರೋಪಿಗಳ ವಿರುದ್ಧ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು ಇಂದು ಸುಪ್ರೀಂಕೋರ್ಟ್ ನಲ್ಲಿ ಇದೀಗ ಈ ಒಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆ ಆರಂಭವಾದಾಗ ಹೈ ಕೋರ್ಟ್

ರೇಣುಕಾಚಾರ್ಯ ಕೊಲೆ ಪ್ರಕರಣ| ದರ್ಶನ್ ಮತ್ತು‌ ಗ್ಯಾಂಗ್ ಗೆ ಸುಪ್ರೀಂ ನೋಟೀಸ್ Read More »

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ| ಇಂದು ಹುಟ್ಟುವ ಹೆಣ್ಣುಮಗುವಿಗೆ ಸಿಗಲಿದೆ ಸ್ಪೆಷಲ್ ಗಿಪ್ಟ್

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಕ್ರವಾರ(ಜ.24) ಜನಿಸುವ ಎಲ್ಲ ಹೆಣ್ಣು ಮಗುವಿಗೆ ವಿಶೇಷ ಉಡುಗೊರೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಅನುಸಾರ ಇಲಾಖೆ ಈ ಅಭಿಯಾನ ಹಮ್ಮಿಕೊಂಡಿದೆ. ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಳ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯುವ ಜಾಗೃತಿ ಕಾರ್ಯಕ್ರಮದ ಭಾಗ ಇದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ‘ಪಿಂಕ್ ಲೈಟ್’ ಬೆಳಗಲೂ ಸೂಚಿಸಲಾಗಿದೆ. ಶುಕ್ರವಾರ ಜನಿಸಿದ ಹೆಣ್ಣು ಮಗುವಿನ ಕುಟುಂಬಕ್ಕೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ| ಇಂದು ಹುಟ್ಟುವ ಹೆಣ್ಣುಮಗುವಿಗೆ ಸಿಗಲಿದೆ ಸ್ಪೆಷಲ್ ಗಿಪ್ಟ್ Read More »

ಉಪ್ಪಿನಂಗಡಿ: ಶ್ರೀರಾಮ ಶಾಲೆಯಲ್ಲಿ ಶ್ರೀರಾಮ, ಆಂಜನೇಯ ಮೂರ್ತಿ ಲೋಕಾರ್ಪಣೆ

ಸಮಗ್ರ ನ್ಯೂಸ್: ಭಾರತವು ವಿಶ್ವದ ನಾಯಕತ್ವವನ್ನು ವಹಿಸುವ ಹೊಸ್ತಿಲಲ್ಲಿದ್ದು, ದೇಶದ ಪ್ರತಿ ಮಗುವೂ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಬಲ ಶಕ್ತಿಯಾಗಿ ಮೂಡಿಬರಬೇಕಾಗಿದೆ. ಈ ಸಂಬಂಧ ಮಕ್ಕಳನ್ನು ಭಯ ಮುಕ್ತಗೊಳಿಸಬೇಕು’ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು. ಉಪ್ಪಿನಂಗಡಿಯ ವೇದ ಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಸ್ಥಾಪಿಸಲಾದ ಶ್ರೀರಾಮ ಮತ್ತು ಆಂಜನೇಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.‌ ವೈದ್ಯ ಡಾ.ಕೆ.ಜಿ.ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈ

ಉಪ್ಪಿನಂಗಡಿ: ಶ್ರೀರಾಮ ಶಾಲೆಯಲ್ಲಿ ಶ್ರೀರಾಮ, ಆಂಜನೇಯ ಮೂರ್ತಿ ಲೋಕಾರ್ಪಣೆ Read More »

ಮಂಗಳೂರು: ಸಲೂನ್ ಮೇಲೆ‌ ದಾಳಿ ಪ್ರಕರಣ| ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಪ್ರಸಾದ್ ಅತ್ತಾವರ ಬಂಧನ

ಸಮಗ್ರ ನ್ಯೂಸ್: ಮಂಗಳೂರು ಬಿಜೈನ ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ಸೂಚನೆ ನೀಡಿದ ಬೆನ್ನಲ್ಲೆ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರದ ಸಲೂನ್ ಮೇಲೆ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಬಂಧಿಸಿರುವುದಾಗಿ ಪೊಲೀಸರು

ಮಂಗಳೂರು: ಸಲೂನ್ ಮೇಲೆ‌ ದಾಳಿ ಪ್ರಕರಣ| ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಪ್ರಸಾದ್ ಅತ್ತಾವರ ಬಂಧನ Read More »

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಸುದೀಪ್ ಅತ್ಯುತ್ತಮ ನಟ; ಅನುಪಮಾ ಗೌಡ ಅತ್ಯುತ್ತಮ ನಟಿ

ಸಮಗ್ರ ನ್ಯೂಸ್: 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ನಟ ಸುದೀಪ್ ಹಾಗೂ ನಟಿ ಅನುಪಮ ಗೌಡ ಕ್ರಮವಾಗಿ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್ ಗೆ ಈ ಪ್ರಶಸ್ತಿ ಬಂದಿದೆ. ಇನ್ನೂ ಥ್ರಿಲ್ಲರ್ ಚಿತ್ರ ‘ತ್ರಯಂಬಕಂನ ‘ ಅಮೋಘ ನಟನೆಗಾಗಿ ಅನುಪಮ ಗೌಡ ‘ಅತ್ಯುತ್ತಮ ನಟಿ’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರ ‘ಮೋಹನದಾಸ’ ಮೊದಲ ಅತ್ಯುತ್ತಮ ಚಿತ್ರವಾಗಿದ್ದು, ಡಾರ್ಲಿಂಗ್ ಕೃಷ್ಣ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಸುದೀಪ್ ಅತ್ಯುತ್ತಮ ನಟ; ಅನುಪಮಾ ಗೌಡ ಅತ್ಯುತ್ತಮ ನಟಿ Read More »

ದೇಶದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ| ಪತ್ನಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ‌ ಕೆರೆಗೆ ಎಸೆದ‌ ಮಾಜಿ ಸೈನಿಕ

ಸಮಗ್ರ ನ್ಯೂಸ್: ನಿವೃತ್ತ ಸೈನಿಕನೊಬ್ಬ ಪತ್ನಿಯನ್ನು ಕೊಂದು, ದೇಹದ ಭಾಗಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ಕೆರೆಗೆ ಎಸೆದಿರುವ ಭೀಭತ್ಸ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ರಕ್ಷಣಾ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೇನಾ ಜವಾನ ಜನವರಿ 15 ರಂದು ತನ್ನ ಪತ್ನಿಯನ್ನು ಕೊಂದು, ಶವವನ್ನು ತುಂಡುಗಳಾಗಿ ಕತ್ತರಿಸಿ, ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ, ಮೂಳೆಗಳನ್ನು ಪುಡಿಮಾಡಿ ನಂತರ ಅವಶೇಷಗಳನ್ನು ಸರೋವರಕ್ಕೆ ಎಸೆದಿದ್ದಾನೆ. ಸಂತ್ರಸ್ತ ಪುಟ್ಟವೆಂಕಟ ಮಾಧವಿ(35) ಜನವರಿ 18 ರಂದು ಕಾಣೆಯಾಗಿದ್ದಾಳೆ ಎಂದು ಮಾಧವಿಯ ಪೋಷಕರು

ದೇಶದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ| ಪತ್ನಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ‌ ಕೆರೆಗೆ ಎಸೆದ‌ ಮಾಜಿ ಸೈನಿಕ Read More »

ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿ ಇಡಬಾರದೇ? ವಾಸ್ತು ಪ್ರಕಾರ ಹೇಳೋದೇನು?

ಸಮಗ್ರ ವಿಶೇಷ: ವಾಸ್ತುಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಒಂದು ಮನೆಯ ಮುಖ್ಯ ಬಾಗಿಲು. ಮುಖ್ಯ ದ್ವಾರದ ಬಗ್ಗೆ ಅನೇಕ ನಿಯಮಗಳನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಲಕ್ಷ್ಮಿ ದೇವಿಯು ಸಹ ಮುಖ್ಯ ಬಾಗಿಲಿನಲ್ಲಿ ನೆಲೆಸಿದ್ದಾಳೆ, ಆದ್ದರಿಂದ ಮುಖ್ಯ ಬಾಗಿಲನ್ನು ಎಂದಿಗೂ ಕೊಳಕು ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯ ಬಾಗಿಲಲ್ಲಿ ಪಾದರಕ್ಷೆ ಮತ್ತು ಚಪ್ಪಲಿಗಳ ರಾಶಿ ಇರಬಾರದು ಅಥವಾ ಬಾಗಿಲ ಬಳಿ ಶೂ ಮತ್ತು ಚಪ್ಪಲಿಗಳನ್ನು ತೆಗೆಯಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿ ಇಡಬಾರದೇ? ವಾಸ್ತು ಪ್ರಕಾರ ಹೇಳೋದೇನು? Read More »

ವಿಟ್ಲ: ಪಂಚಲಿಂಗೇಶ್ವರ ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್| ಕೊಂಚದರಲ್ಲೇ ತಪ್ಪಿದ ಮಹಾಪ್ರಮಾದ

ಸಮಗ್ರ ನ್ಯೂಸ್: ಡ್ರೋನ್ ಒಂದು ಅಪರೇಟರ್ ನಿಯಂತ್ರಣ ತಪ್ಪಿ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ. ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ಒಂದು ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು. ಡ್ರೋನ್ ಬಡಿದ ವೇಳೆ ದೇವರ ಮೂರ್ತಿ

ವಿಟ್ಲ: ಪಂಚಲಿಂಗೇಶ್ವರ ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್| ಕೊಂಚದರಲ್ಲೇ ತಪ್ಪಿದ ಮಹಾಪ್ರಮಾದ Read More »