ಬಿಗ್ ಬಾಸ್ ಗೆದ್ದ ಹನುಮಂತ ಮನೆಯಲ್ಲಿ ‌ಸೂತಕ| ಚಿಕ್ಕಪ್ಪನನ್ನು ಕಳೆದುಕೊಂಡ ಹಳ್ಳಿಹೈದ

ಸಮಗ್ರ ನ್ಯೂಸ್: ಭಾನುವಾರ (ಜ. 26) ಬಿಗ್‌ ಬಾಸ್‌ ಫಿನಾಲೆಯಲ್ಲಿ ಕಿಚ್ಚ ಸುದೀಪ್‌, ಹನುಮಂತು ಅವರ ಕೈ ಎತ್ತುವ ಮೂಲಕ ವಿನ್ನರ್‌ ಘೋಷಣೆ ಮಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಖ್ಯಾತಿ ಪಡೆದ ಹನುಮಂತಗೆ ಎಲ್ಲರೂ ಶುಭಾಶಯ ರವಾನಿಸಿದ್ದರು. ಇತ್ತ ಕಪ್‌ ಜತೆಗೆ ಊರು ತಲುಪಿದ್ದ ಹನುಮಂತು, ಎಲ್ಲರ ಜತೆಗೆ ಸಂಭ್ರಮಿಸಬೇಕು ಎಂದುಕೊಂಡಿದ್ದರು. ಆದರೆ, ಹಠಾತ್‌ ಬೆಳವಣಿಗೆಯಲ್ಲಿ ಅವರ ಚಿಕ್ಕಪ್ಪ ನಿಧನರಾಗಿದ್ದಾರೆ.

Ad Widget ... ..

ಬಿಗ್‌ ಬಾಸ್‌ನಲ್ಲಿ ಹನುಮಂತ ಗೆದ್ದ ಬೆನ್ನಲ್ಲೇ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದಲ್ಲಿ ಅವರ ಆಪ್ತರು, ಸ್ನೇಹಿತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Ad Widget

ಅಷ್ಟೇ ಅಲ್ಲದೇ, ಅದ್ಯಾವಾಗ ಹನುಮಂತು ಊರಿಗೆ ಬರ್ತಾನೆ, ಅವನನ್ನು ಅದ್ಯಾವಾಗ ಭೇಟಿ ಮಾಡಿ, ಸಂಭ್ರಮಾಚರಣೆ ಮಾಡುವುದು ಎಂದೆಲ್ಲ ಸಿದ್ಧತೆ ಮಾಡಿದ್ದರು. ಅದರಂತೆ, ಸುತ್ತ ಮುತ್ತಲಿನ ಗ್ರಾಮಗಳ ಸ್ನೇಹಿತರು ಚಿಲ್ಲೂರು ಬಡ್ನಿಗೆ ಆಗಮಿಸಿದ್ದರು. ಆದರೆ, ಇದೀಗ ಹನುಮಂತು ಅವರ ಚಿಕ್ಕಪ್ಪ, ದೇವಪ್ಪ ಇಂದು (ಜ. 27) ನಿಧನರಾದ ಬೆನ್ನಲ್ಲೇ, ಸಂಭ್ರಮಾಚರಣೆ ಸ್ಥಗಿತಗೊಂಡಿದೆ.

Leave a Comment

Your email address will not be published. Required fields are marked *