ರೇಣುಕಾಸ್ವಾಮಿ ಕೊಲೆ ಪ್ರಕರಣ| ಮೂರು ದಿನದಲ್ಲಿ ಎಸ್‌ಐಟಿ ಪೊಲೀಸರ ಕೈ ಸೇರಲಿದೆ ಎಫ್‌ಎಸ್‌ಎಲ್‌ ವರದಿ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (FSL Report) ಮೂರು ದಿನದಲ್ಲಿ ಎಸ್‌ಐಟಿ ಪೊಲೀಸರ ಕೈ ಸೇರಲಿದೆ. ಈಗಾಗಲೇ 70% ವರದಿ ಪೊಲೀಸರ ಕೈಸೇರಿದೆ. ಉಳಿದ 30% ವರದಿ ಎಫ್‌ಎಸ್‌ಎಲ್‌ನಿಂದ ಬರಬೇಕಾಗಿತ್ತು. ಬರಬೇಕಾದ ಅಷ್ಟೂ ವರದಿಗಳು ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದ ವರದಿಯಾಗಿದೆ.

Ad Widget ... ..

ಆರೋಪಿಗಳ ಐಪೋನ್ ಡೇಟಾ ರಿಟ್ರೀವ್ ಮತ್ತು ಡಿಲೀಟ್ ಮಾಡಿದ ದೃಶ್ಯಗಳ ರಿಟ್ರೀವ್ ಮಾಡಲು ಹೈದರಾಬಾದ್ ಗೆ ಕಳುಹಿಸಲಾಗಿತ್ತು. ರಿಟ್ರೀವ್ ವಿಡಿಯೋಗಳನ್ನು ಪರಿಶೀಲನೆಗಾಗಿ ಮತ್ತೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ತನಿಖಾ ಕಾಲದಲ್ಲಿ ಪತ್ತೆಯಾದ ವಿಡಿಯೋಗಳಿಗೂ ಹಾಗೂ ರಿಟ್ರೀವ್ ವಿಡಿಯೋಗಳಿಗೆ ಹೋಲಿಕೆ ಮಾಡಿ ರಿಪೋರ್ಟ್ ಕೊಡಬೇಕಾಗುತ್ತದೆ. ಹೀಗಾಗಿ ಇಡೀ ಪ್ರಕರಣ ತನಿಖೆ ಹೈದರಾಬಾದ್ ಎಫ್‌ಎಸ್‌ಎಲ್‌ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ವರದಿಯಲ್ಲಿ ಡಿಲೀಟ್‌ ಮಾಡಿದ ದೃಶ್ಯ ಸಿಕ್ಕಿದರೆ ದರ್ಶನ್‌ ಗ್ಯಾಂಗ್‌ಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.

Ad Widget

Leave a Comment

Your email address will not be published. Required fields are marked *