ಹೈದರಾಬಾದ್: ಅಮ್ಮ ಬೀಡಿ ಕಾರ್ಮಿಕೆ: ಮಗ ಯುಪಿಎಸ್ಸಿಯಲ್ಲಿ 27ನೇ ರ್‍ಯಾಂಕ್

ಸಮಗ್ರ ನ್ಯೂಸ್ : ಯುಪಿಎಸ್ಸಿ ಸಿವಿಲ್ಸ್ ಅಂತಿಮ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ತೆಲುಗು ರಾಜ್ಯಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಈ ಪರೀಕ್ಷೆಗಳಲ್ಲಿ, ಬಡ ಕುಟುಂಬದ ಅನೇಕ ಜನರು ರ್ಯಾಂಕ್ ಪಡೆದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಬೀಡಿ ಕಾರ್ಮಿಕೆಯ ಮಗ ಸಾಯಿಕಿರಣ್ ಯುಪಿಎಸ್ಸಿಯಲ್ಲಿ 27ನೇ ರ್ಯಾಂಕ್ ಪಡೆಯುವ ಮೂಲಕ ಬಡತನವನ್ನು ಮೆಟ್ಟಿ ನಿಂತಿರುವ ಘಟನೆ ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದ ವೆಲಿಚಲ ಗ್ರಾಮದಲ್ಲಿ ನಡೆದಿದೆ.

Ad Widget ... ..

ಕಾಂತ ರಾವ್ ಮತ್ತು ಲಕ್ಷ್ಮಿ ದಂಪತಿ ಮಗ ಸಾಯಿಕಿರಣ್ ಮತ್ತು ಶ್ರವಂತಿ ಎಂಬ ಇಬ್ಬರು ಮಕ್ಕಳಿದ್ದಾರೆ. 2016ರಲ್ಲಿ ಕಾಂತರಾವ್ ನಿಧನರಾದಾಗ ಇಡೀ ಕುಟುಂಬದ ಜವಾಬ್ದಾರಿ ಲಕ್ಷ್ಮಿಯ ಮೇಲಿತ್ತು. ತನ್ನಿಬ್ಬರು ಮಕ್ಕಳನ್ನು ಬೀಡಿ ಕಟ್ಟುವ ಕೆಲಸ ಮಾಡಿ ಸಾಕಿ ಒಳ್ಳೆಯ ಶಿಕ್ಷಣ ನೀಡಿದ್ದಾರೆ.

Ad Widget

ಅಮ್ಮನ ಕಷ್ಟವನ್ನು ಕಂಡ ಸಾಯಿಕಿರಣ್ ಮತ್ತು ಶ್ರವಂತಿ ಕಷ್ಟಪಟ್ಟು ಓದಿದರು. ಶ್ರವಂತಿಗೆ ಎಇ ಕೆಲಸ ಸಿಕ್ಕಿದ್ದು, ಬೋಯಿನಪಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಸಹೋದರ ಸಾಯಿಕಿರಣ್ ತನ್ನ ಅಕ್ಕನ ಸ್ಫೂರ್ತಿಯಿಂದ ಸಿವಿಲ್ಸ್ಗೆ ತಯಾರಿ ನಡೆಸುತ್ತಿದ್ದನು. ಕಷ್ಟಪಟ್ಟು ಓದಿ, ಇತ್ತೀಚೆಗೆ ಪ್ರಕಟವಾದ ಸಿವಿಲ್ಸ್ ಫಲಿತಾಂಶದಲ್ಲಿ 27 ನೇ ರ್ಯಾಂಕ್ ಗಳಿಸಿದ್ದಾರೆ.

ಸಾಯಿಕಿರಣ್ ಹೈದರಾಬಾದ್ನ ಕ್ವಾಲ್ಕಾಮ್ನಲ್ಲಿ ಹಿರಿಯ ಹಾರ್ಡ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡು. ವಾರಾಂತ್ಯದ ರಜೆಯಲ್ಲಿ ಮನೆಯಲ್ಲೇ ಓದಿಕೊಂಡು ಯುಪಿಎಸ್ಸಿಗೆ ತಯಾರಿ ನಡೆಸಿದ್ದರು. 2021ರಲ್ಲಿ ಮೊದಲ ಬಾರಿಗೆ ಸಿವಿಲ್ಸ್ ಪರೀಕ್ಷೆ ಎದುರಿಸಿದರು. ಎರಡನೇ ಪ್ರಯತ್ನದಲ್ಲಿ ದುಪ್ಪಟ್ಟು ಉತ್ಸಾಹದಿಂದ ಅಧ್ಯಯನ ಮಾಡಿ 27ನೇ ರ್ಯಾಂಕ್ ಗಳಿಸಿದ್ದಾರೆ.

ಐಎಎಸ್ ಆಗಬೇಕೆಂಬ ದೃಢ ಸಂಕಲ್ಪದೊಂದಿಗೆ ಗುರಿ ಸಾಧಿಸಿದೆ. ನನ್ನ ಶ್ರೇಣಿಗೆ ಅನುಗುಣವಾಗಿ ಐಎಎಸ್ ಸಿಗುತ್ತದೆ ಎಂದು ಸಾಯಿಕಿರಣ್ ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *