ಮಂಗಳೂರು: ಮೀನು ಹಿಡಿಯಲು ಹೋದ ಬಾಲಕ ಸಮುದ್ರಪಾಲು

ಸಮಗ್ರ ನ್ಯೂಸ್:‌ ಮೀನು ಹಿಡಿಯಲು ಹೋದ ಅಪ್ರಾಪ್ತ ಬಾಲಕ ಗಾಳಿಯ ರಭಸಕ್ಕೆ ಸಮುದ್ರಪಾಲಾದ ಘಟನೆ ನಗರದ ತೋಟ ಬೆಂಗ್ರೆ ಸಮೀಪ ನಡೆದಿದೆ.

Ad Widget ... ..

ಮೃತ ಬಾಲಕನನ್ನು ಮಿಥುನ ಎಂಬವರ ಪುತ್ರ ಪ್ರಜೀತ್ ಎಂ. ತಿಂಗಳಾಯ ಎಂದು ಗುರುತಿಸಲಾಗಿದೆ.

Ad Widget

ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ವ್ಯವಸ್ಥೆಗೆ, ತನ್ನ ತಂದೆಯ ಜೊತೆ ಗುರುವಾರ ಸಂಜೆ 5:30ಕ್ಕೆ ಬೆಂಗ್ರೆ ಸಮುದ್ರದಲ್ಲಿ ಮಿನುಗಾರಿಕೆಗೆ (ನೆಗರ್ ಭಲೆ) ಹೋದ ಸಂದರ್ಭದಲ್ಲಿ, ಗಾಳಿ ರಭಸಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾನೆ ಎನ್ನಲಾಗಿದೆ. ಸಂಜೆ 6:50ಕ್ಕೆ ಮೃತದೇಹವು ಅಲೆಗಳ ರಭಸಕ್ಕೆ ಮೇಲೆ ಬಂದಿದ್ದು ಸ್ಥಳಿಯರು ಮೇಲೆತ್ತಿ ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.

Leave a Comment

Your email address will not be published. Required fields are marked *