ಬಸ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿಸಿದ ಬಸ್ ಕಂಡಕ್ಟರ್

ಸಮಗ್ರ ನ್ಯೂಸ್ :ಮಂಗಳೂರಿನ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಕರೊಬ್ಬರು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಮರೆತು ಬಿಟ್ಟು ಹೋಗಿದ್ದರು. ಅದನ್ನು ಮರಳಿ ವಾರಸುದಾರರಿಗೆ ಬಸ್ ನ ಕಂಡಕ್ಟರ್ ತಲುಪಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

Ad Widget ... ..

ನವದುರ್ಗ ಬಸ್ಸಿನ ನಿರ್ವಾಹಕರಾದ ಸಂತೋಷ ಶೆಟ್ಟಿ ಅವರಿಗೆ ಬಸ್ ನಿರ್ವಹಣಾ ಸಮಯದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಚಿನ್ನಾಭರಣ ಸಿಕ್ಕಿದ್ದು, ಬಳಿಕ ಚಿನ್ನ ಕಳೆದುಕೊಂಡವರ ಮಾಹಿತಿ ಪಡೆದ ಅವರು ಕಟೀಲ್ ಕಿನ್ನಿಗೋಳಿ ನಿವಾಸಿಗಳನ್ನು ಹುಡುಕಿ 6 ಪವನ್ ಹೆಚ್ಚಿನ ಚಿನ್ನಭಾರಣ ಗಳನ್ನು ಹಿಂತಿರುಗಿಸಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

ಚಿನ್ನವನ್ನು ಮರಳಿಪಡೆದವರು ಬಸ್ಸಿನ ಚಾಲಕ ನಿರ್ವಹಕಾರ ಪ್ರಾಮಾಣಿಕತೆ ಯನ್ನು ಸಂತೋಷದಿಂದ ಮನತ್ಪೂರ್ವಕವಾಗಿ ಕೊಂಡಾಡಿದ್ದಾರೆ. ತಮ್ಮ ರಕ್ತ ಸಂಬಂಧ ದಲ್ಲ್ಲೇ ಪ್ರಾಮಾಣಿಕತೆ ಹುಡುಕಲು ಕಷ್ಟಕರವಾದ ಈಗಿನ ಕಾಲ ಘಟ್ಟದಲ್ಲಿ ಕರಾವಳಿ ಜನತೆ ಮೆಚ್ಚುವ ಕೆಲಸ ಮಾಡಿದ ನಿಮಗೆ ಪ್ರೀತಿಯ ಧನ್ಯವಾದಗಳು ಎಂದಿದ್ದಾರೆ.

Leave a Comment

Your email address will not be published. Required fields are marked *