ರಾಮ ಮಂದಿರ ಉದ್ಘಾಟನೆ/ ಬಾಬ್ರಿ ಮಸೀದಿ ಪರ ವಾದಿಯಾಗಿದ್ದ ಇನ್ಸಾಲ್ ಅನ್ಸಾರಿಗೂ ಆಹ್ವಾನ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಬ್ರಿ ಮಸೀದಿ ಪರ ವಾದಿಯಾಗಿದ್ದ ಇನ್ಸಾಲ್ ಅನ್ಸಾರಿಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನಿಂದ ಆಹ್ವಾನ ನೀಡಲಾಗಿದೆ. ಇನ್ಸಾಲ್ ಅನ್ಸಾರಿ ಅವರು ಬಾಬ್ರಿ ಮಸೀದಿಯ ಪ್ರಮುಖ ಬೆಂಬಲಿಗರಾಗಿದ್ದರು.

Ad Widget ... ..

ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುನರಾಭಿವೃದ್ಧಿ ಮಾಡಿದ ರೈಲ್ವೆ ನಿಲ್ದಾಣ ಮತ್ತು ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಅಲ್ಲದೇ ಉತ್ತರ ಪ್ರದೇಶದಲ್ಲಿ ಇತರ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದರು. ಈ ಸಂದರ್ಭ ಮೋದಿ ಅವರನ್ನು ಸ್ವಾಗತಿಸಿದ್ದ ಜನರಲ್ಲಿ ಅನ್ಸಾರಿ ಕೂಡ ಸೇರಿದ್ದರು ಮತ್ತು ರೋಡ್ ಶೋ ವೇಳೆ ಪ್ರಧಾನಿ ಮೋದಿ ಮೇಲೆ ಪುಷ್ಪವೃಷ್ಠಿ ಮಾಡಿ ಗಮನ ಸೆಳೆದಿದ್ದರು.

Ad Widget

Leave a Comment

Your email address will not be published. Required fields are marked *