ಆನೆ ಮೇಲೆ ಅಂಬಾರಿ/ ಅಭಿಮನ್ಯು ನಂತರ ಅಂಬಾರಿ ಹೊರುವವರು ಯಾರು?

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ನಾಡಹಬ್ಬ ದಸರಾ ವಿಶೇಷವೆಂದರೆ ಅದು ಜಂಬೂಸವಾರಿ. ಈ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿ ಇರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಆನೆ ಹೊತ್ತು ಸಾಗುತ್ತದೆ. ಹೀಗಾಗಿ ಅಂಬಾರಿ ಹೊರುವ ಆನೆ ಎಂದಿಗೂ ವಿಶ್ವ ಪ್ರಸಿದ್ದ.

Ad Widget ... ..

ಸದ್ಯ ದಸರಾ ಅಂಬಾರಿಯನ್ನು ಆನೆ ಅಭಿಮನ್ಯು ಹೊತ್ತು ಸಾಗುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷವಾದರೆ ಆನೆಗಳ ಮೇಲೆ ಒತ್ತಡ ಹೇರುವಂತಿಲ್ಲ. ಹೀಗಾಗಿ, ಇನ್ನು ಎರಡು ಬಾರಿ ಅಭಿಮನ್ಯು ಅಂಬಾರಿ ಹೊರಬಹುದು. ಹೀಗಾಗಿ ಭವಿಷ್ಯದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಆನೆಗೆ ಅರಣ್ಯ ಇಲಾಖೆಯು ಪ್ರತಿ ವರ್ಷವೂ ಹುಡುಕಾಟ ನಡೆಸುತ್ತದೆ.

Ad Widget

ಇದೀಗ ಅಭಿಮನ್ಯು ಸ್ಥಾನವನ್ನು ತುಂಬಬಲ್ಲ ಸಮರ್ಥ ಉತ್ತರಾಧಿಕಾರಿ ಯಾರು ಎಂಬುದು ದಸರಾ ಪ್ರಿಯರಿಗೆ ಕುತೂಹಲ ಹುಟ್ಟಿಸಿದೆ.

Leave a Comment

Your email address will not be published. Required fields are marked *