ಕೆಎಸ್ಎಸ್ ಮಹಾವಿದ್ಯಾಲಯದ ‘ಯಕ್ಷತರಂಗ’ ಯಕ್ಷಗಾನ ತಂಡದ 2023-24ನೇ ಸಾಲಿನ ತರಬೇತಿ ಕಾರ್ಯಕ್ರಮದ ಉದ್ಘಾಟನೆ

ಸಮಗ್ರ ನ್ಯೂಸ್: ಸೆ. 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ “ಯಕ್ಷತರಂಗ” ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಯಕ್ಷಗಾನ ತಂಡದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಯಕ್ಷಗಾನ ಗುರುಗಳಾದ ರಾಧಾಕೃಷ್ಣ ಗೌಡ ಅಗೋಳಿಕಜೆ ನೆರವೇರಿಸಿದರು.

Ad Widget ... ..

ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕಿ ಪ್ರೊ. ಲತಾ ಬಿ. ಟಿ. ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಕ್ಷತರಂಗದ ಸಂಯೋಜಕ ಪ್ರೊ.ಮನೋಹರ ಕೆ. ಪ್ರಾಸ್ತವಿಕ ನುಡಿಗಳನ್ನಾಡಿದರು.

Ad Widget

ಕಾರ್ಯಕ್ರಮದಲ್ಲಿ ಯಕ್ಷತರಂಗದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಓಂ ಪ್ರಕಾಶ್ ಸ್ವಾಗತಿ, ರಚನಾರವರು ಪ್ರಾರ್ಥಿಸಿ, ಯಕ್ಷತರಂಗದ ವಿದ್ಯಾರ್ಥಿ ನಾಯಕ ಉದಯ್ ಕುಮಾರ್ ಅವರು ವಂದಿಸಿದರು. ಕಲ್ಪನಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *