ಬೆಳ್ತಂಗಡಿ: ಬಂತಡ್ಕ ದ ರಸ್ತೆಯ ಗೋಳು ಕೇಳುವವರು ಯಾರು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ರಸ್ತೆಗೆ ಸಂಚರಿಸುವಾಗ ಸಿಗುವಂತಹ ಬಂತಡ್ಕ ಪ್ರದೇಶದ 2 ಕಿಲೋಮಿಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸರಿಯಾದ ರೀತಿಯಲ್ಲಿ ರಸ್ತೆಗೆ ಕಾಂಗ್ರೆಟ್ ಹಾಗೂ ಒಳ ಚರಂಡಿ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget ... ..

ಸರಿಸುಮಾರು 70 ಅಧಿಕ ಮನೆಗಳಿವೆ 400 ರಿಂದ 500 ವರೆಗೆ ಜನ ಇರುವಪ್ರದೇಶ ದಿನ ನಿತ್ಯ ಸಂಚರಿಸುವ ನೂರಾರು ವಾಹನಗಳು ಹಾಗೂ ಜನಸಾಮಾನ್ಯರು, ಮಕ್ಕಳು ಸಂಚರಿಸುತ್ತಾರೆ. ರಸ್ತೆಯಲ್ಲಿ ಹೊಂಡ ಬಿದ್ದಿರುವುದರಿಂದ ಜನ ಸಾಮಾನ್ಯರಿಗೆ ಓಡಾಡಲು ಕಷ್ಟಕರವಾಗಿದೆ.

Ad Widget

25 ವರ್ಷಗಳಿಂದ ಬಂತಡ್ಕದ ಭಾಗದ ಜನರಿಗೆ ಸರಿಯಾದ ರೀತಿಯಲ್ಲಿ ಮೂಲಸೌಕರ್ಯ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಆದರೂ ಸಕಾಲಕ್ಕೆ ಇದನ್ನು ದುರಸ್ತಿಗೊಳಿಸವ ಕಾರ್ಯ ಯಾರಿಂದಲೂ ಆಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ರಸ್ತೆ ಕಾಂಗ್ರೆಟ್ ಒಳಚರಂಡಿ ಆಗುತ್ತಾ ಎಂದು ಜನ ಕಾದುನೋಡಬೇಕಾಗಿದೆ.

Leave a Comment

Your email address will not be published. Required fields are marked *