ಕರಾವಳಿಯಲ್ಲಿ ಮತ್ತೆ ಬಿರುಸು ಪಡೆದ ಮಳೆ

ಸಮಗ್ರ ನ್ಯೂಸ್ : ಕರಾವಳಿ ಭಾಗದಲ್ಲಿ ನಿನ್ನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಪ್ರಾರಂಭವಾಗಿದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಮತ್ತೆ ಮುಂದುವರೆದಿದೆ.

Ad Widget ... ..

ನಿನ್ನೆ ಶುಕ್ರವಾರ ಹಗಲು ಮಳೆ ಸ್ವಲ್ಪ ಮಟ್ಟಿನ ವಿರಾಮ ಪಡೆದಿತ್ತು, ಆದರೆ ರಾತ್ರಿ ಇಡೀ ಧಾರಾಕಾರ‌ ಮಳೆಯಾಗಿದ್ದು, ಶನಿವಾರವೂ ಜಿಲ್ಲೆಯಾದ್ಯಂತ ಬಿರುಸಿನ‌ ಮಳೆಯಾಗುತ್ತಿದೆ. ಮಳೆಯಿಂದಾಗಿ‌ ಮಂಗಳವಾರ ವಾರದಿಂದ ಶುಕ್ರವಾರದವರೆಗರ ಜಿಲ್ಲಾಡಳಿತವು ಶಾಲೆಗಳಿಗೆ ರಜೆ‌ ನೀಡಿತ್ತು. ಶನಿವಾರ ಶಾಲೆಗಳು ಪುನರಾರಂಭಗೊಂಡಿವೆ.

Ad Widget

ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಸ್ತೆಗೆ ಮರ ಬಿದ್ದಿದ್ದು, ರಾತ್ರಿಯೇ ಅದನ್ನು ತೆರೆವುಗೊಳಿಸಲಾಯಿತು. ಉಳ್ಳಾಲ ನಗರಸಭೆ ವ್ಯಾಪ್ತಿಯ ಸೇವಂತಿ ಗುಡ್ಡೆಯಲ್ಲಿ ಗುಡ್ಡ ಜರಿದು ಭಾರಿ ಗಾತ್ರದ ಕೆಂಪುಕಲ್ಲು ಉರುಳಿ ಬಿದ್ದಿದ್ದು, ರಾತ್ರಿಯೇ‌ ಅದನ್ನು ತೆರವುಗೊಳಿಸಲಾಯಿತು.

Leave a Comment

Your email address will not be published. Required fields are marked *