ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡುತ್ತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬಿ ಫಾರಂ ಅನ್ನು ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಜಿ ಇವರಿಗೆ ನೀಡದೇ‌ ಪೆಂಡಿಂಗ್ ಇರಿಸಲಾಗಿದೆ. ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ನಡೆಸಿ ವರದಿ ಬಳಿಕ ಬಿ ಫಾರಂ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ.

Ad Widget ... ..

ಇಂದು ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಹಾಗೂ ಅಧಿಕೃತ ಅಭ್ಯರ್ಥಿ ‌ಜಿ. ಕೃಷ್ಣಪ್ಪ ಜೊತೆ ಅವರು ಮಾತುಕತೆ ನಡೆಸಿದರು. ಬಳಿಕ ಮಾಜಿ ಸಚಿವ ರಮಾನಾಥ ರೈಗಳಿಗೆ ಪೋನಾಯಿಸಿ ಮಾತನಾಡಿದ ಡಿ.ಕೆ ಶಿವಕುಮಾರ್ ಸುಳ್ಯದಲ್ಲಿ ಶೀಘ್ರ ಸಭೆ ಕರೆದು ವರದಿ ನೀಡುವಂತೆ‌ ಸೂಚಿಸಿದ್ದಾರೆ.

Ad Widget

ಸದ್ಯಕ್ಕೆ ಬಿ.ಪಾರಂ ಹಂಚಿಕೆ ಪೆಂಡಿಂಗ್ ಇರಿಸಿದ್ದು, ಕಾದು ನೋಡುವ ತಂತ್ರ ರೂಪಿಸಲಾಗಿದೆ.

Leave a Comment

Your email address will not be published. Required fields are marked *