ಸಮಗ್ರ ನ್ಯೂಸ್: ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿ ಬಗ್ಗೆ ಇದುವರೆಗೂ ನಡೆದಿರುವ ಹೋರಾಟದಂತೆ ಇದೀಗ ಮನೆ ಮನೆ ಭೇಟಿ ಮಾಡಿ ನೋಟಾ ಅಭಿಯಾನ ಪ್ರಾರಂಭ ಮಾಡುವುದಾಗಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆ ಹೇಳಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ವೇದಿಕೆ ಅಧ್ಯಕ್ಷರು, ಈ ವಾರದಿಂದ ಮನೆ ಮನೆ ಭೇಟಿ ಮಾಡಿ, ಈ ಬಗ್ಗೆ ಸಮಗ್ರ ಮಾಹಿತಿಗಳನ್ನು ಜನತೆ ಮುಂದಿಟ್ಟು,ನಮ್ಮ ವಾರ್ಡ್ ನ ಹಾಗೂ ರಸ್ತೆ ಫಲಾನುಭವಿಗಳು, ರಸ್ತೆ ಅಭಿವೃದ್ಧಿ ಆಗುವ ತನಕ ಮುಂದಿನ ಎಲ್ಲಾ ಚುನಾವಣೆಗಳಲ್ಲಿ, ನೋಟ ಮತ ಹಾಕಿ, ರಾಜ್ಯ ಮಟ್ಟದಲ್ಲಿ ಸರಕಾರವನ್ನು ಎಚ್ಚರಿಸಿ ನಮ್ಮ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವ ಬಗ್ಗೆ,ನೋಟ ಅಭಿಯಾನ ನಡೆಸುವುದು ಎಂದು ತೀರ್ಮಾನಿಸಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಲಾಗಿತ್ತು.
ನಂತರ ಒಂದೆರಡು ದಿನಗಳಲ್ಲಿ, ಆಡಳಿತ ಪಕ್ಷದ,ಮಂಡಲ ಅಧ್ಯಕ್ಷರು, ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ವೇದಿಕೆಯೊಂದಿಗೆ ಸಭೆ ನಡೆಸಿ, ಮಾರ್ಚ್ ಒಳಗೆ ಎರಡು ಕೋಟಿಯ ಕಾಮಗಾರಿ ನಡೆಯುತ್ತದೆ, ಉಳಿದ ರಸ್ತೆಯನ್ನು ಸಹ ಬೇರೆ ಅನುದಾನ ದಡಿಯಲ್ಲಿ, ಹಂತ ಹಂತವಾಗಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ ಮಾಹಿತಿ ಪ್ರಕಾರ ಇದೆ ತಿಂಗಳ 27 ಕ್ಕೆ ಚುನಾವಣೆ ನೀತಿ ಸಂಹಿತಿ ಘೋಷಣೆ ಆಗುತ್ತದೆ. ನೀತಿ ಸಂಹಿತೆ ಘೋಷಣೆ ಆಗುವ ಮೊದಲು, ಟೆಂಡರ್ ಆಗಿ ಕಾಮಗಾರಿ ಪ್ರಾರಂಭ ಆಗಿದ್ದಲ್ಲಿ ಮಾತ್ರ ಮುಂದುವರೆಸಬಹುದು, ಎಂಬ ಕಾನೂನು ಇರುತ್ತದೆ.
ಪ್ರಸ್ತುತ ಎರಡು ಕೋಟಿಯ ಅನುದಾನ ಇದುವರೆಗೆ ಟೆಂಡರ್ ಆಗಿರುವುದಿಲ್ಲ. ಹಾಗೂ ಟೆಂಡರ್ ಆಗಲು ಹಾಗೂ ಆದ ನಂತರ ಕೆಲವು ನಿಯಮಾವಳಿಗಳು ಇದ್ದು, ಅದನ್ನೆಲ್ಲ ತಕ್ಷಣಕ್ಕೆ, ಸಂಬಂಧ ಪಟ್ಟವರು ಮುತುವರ್ಜಿ ವಹಿಸದೆ, ಶೀಘ್ರವಾಗಿ ಮಾಡಲು ಪ್ರಯತ್ನ ಮಾಡದೆ ಇದ್ದಲ್ಲಿ, ವರ್ಕ್ ಆರ್ಡರ್ ಬರಲು ಸಮಯ ಹಿಡಿಯಬಹುದು ಎಂದು ತಿಳಿದುಬಂದಿರುತ್ತದೆ. (ಎರಡು ಕೋಟಿ ಲ್ಯಾಪ್ಸ್ ಆಗುವ ಸಂಭವ ಇರಬಹುದು)
ಆದುದರಿಂದ, ಜನಪ್ರತಿನಿದಿನಗಳ ಭರವಸೆ ಯ ಮೇಲೆ ನಂಬಿಕೆ ಇಟ್ಟು, ಇದೆ ತಿಂಗಳ 22 ರ ತನಕ ಅಭಿವೃದ್ಧಿ ಬಗೆಗಿನ ಆಗು ಹೋಗುಗಳನ್ನು ತಿಳಿದುಕೊಂಡು, ಚುನಾವಣೆ ಮೊದಲು ರಸ್ತೆ ಅಭಿವೃದ್ಧಿ ಆಗುವುದಿಲ್ಲ ಎಂದು ಕಂಡು ಬಂದಲ್ಲಿ, ಮಾರ್ಚ್ 23 ರಿಂದ, ಈ ಮೊದಲೇ ನಿರ್ಣಯ ಮಾಡಿದಂತೆ ಮನೆ ಮನೆ ಭೇಟಿ ಮಾಡಿ ನೋಟ ಅಭಿಯಾನ ಪ್ರಾರಂಭ ಮಾಡುವುದು ಎಂದು, ಅಡ್ತಲೆಯಲ್ಲಿ ನಿನ್ನೆ ನಡೆದ ನಾಗರಿಕ ಹಿತರಕ್ಷಣ ವೇದಿಕೆಯ ಗೌರವ ಸಲಹೆಗಾರರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ.
ಈ ನಮ್ಮ ಹೋರಾಟವು ಯಾವುದೇ ಸ್ವಂತ ಫಲಪೇಕ್ಷೆ ಇಲ್ಲದೆ, ಊರಿನ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಲ್ಲಿ ಆಗಿರುತ್ತದೆ, ಅಲ್ಲದೆ ಯಾವುದೇ ವ್ಯಕ್ತಿಗಳಿಗೆ, ಪಕ್ಷಕ್ಕೆ, ಅಧಿಕಾರಿಗಳಿಗೆ, ಜನಪ್ರತಿನಿದಿನಗಳಿಗೆ ವ್ಯಕ್ತಿಗತವಾದ ನೋವು ಉಂಟು ಮಾಡುವ, ಅಥವಾ ಇತರೆ ಯಾವುದೇ ಲಾಭಕ್ಕಾಗಿ ಅಲ್ಲಾ ಎಂಬುದನ್ನು ಈ ಮೂಲಕ ಸರ್ವರಿಗೂ ಮತ್ತೊಮ್ಮೆ ಸ್ಪಷ್ಟಪಡಿಸುತ್ತಾ, ವೇದಿಕೆಯ ಎಲ್ಲಾ ಸದಸ್ಯರಿಗೂ ಯಾವುದೇ ವಯಕ್ತಿಕ ಲಾಭ ಇಲ್ಲದೆ, ಜನತೆ ಕೊಟ್ಟಿರುವ ಜವಾಬ್ದಾರಿಯನ್ನು, ಹೋರಾಟ ಮಾಡುವ ಮೂಲಕ ಆದರೂ ಪಡೆದು, ನಮ್ಮೂರನ್ನು ಅಭಿವೃದ್ಧಿ ಪಡಿಸುವ,ನಮ್ಮ ಈ ಪ್ರಯತ್ನಕ್ಕೆ, ವಾರ್ಡ್ ನ ಸಂಪೂರ್ಣ ಜನತೆ ಹಾಗೂ ರಸ್ತೆಯ ಫಲಾನುಭವಿಗಳಾದ ತಾವೆಲ್ಲರೂ, ಮನೆ ಭೇಟಿ ಸಂದರ್ಭ ವೇದಿಕೆಯೊಂದಿಗೆ ಸಹಕಾರ ನೀಡಬೇಕಾಗಿ ವಿನಂತಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.