ಸಮಗ್ರ ನ್ಯೂಸ್ : ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಾಗ ಪಟ್ಟಣ ಘಟಕವನ್ನು ಫೆ.5 ರಂದು ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾಗಪಟ್ಟಣ ಶಾಲೆಯಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ಅರಸುರತ್ನ ಎಂಬವರು ನೆರವೇರಿಸಿದ್ದು, ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಹಿಸಿಕೊಂಡರು. ನಾಗ ಪಟ್ಟಣ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ಎಂ.ಎನ್, ಕಾರ್ಯದರ್ಶಿಯಾಗಿ ಗುರುರಾಜ್, ಜೊತೆ ಕಾರ್ಯದರ್ಶಿಯಾಗಿ ಶ್ರೀಕಾಂತ್, ಗೌರವಾಧ್ಯಕ್ಷರಾಗಿ ಅರಸು ರತ್ನಂ ಇವರನ್ನು ನೇಮಕ ಮಾಡಲಾಯಿತು.


ಈ ಸಂದರ್ಭದಲ್ಲಿ ರಾಜೇಶ ಜಗದೀಶ ಮುನಿಸ್ವಾಮಿ ಗೋವಿಂದರಾಜ್ ಕಾರ್ತಿಕ್ ಅಶೋಕ್ ಪುಷ್ಪರಾಜ್ ಕದಿರ್ ವೇಲ್ ಹೇಮನಾಥ ಪ್ರಸಾದ್ ಕುಮಾರ್ ಪುರುಷೋತ್ತಮ ಕರುಣಕಾರ ಶಶಿಕುಮಾರ್ ಲತೀಶ ಜಯಪ್ರಕಾಶ್ ಜಯಂತ ಎಂ ಎಸ್ ಸುಬ್ರಹ್ಮಣ್ಯ ಮತ್ತು ಇತರರು ಉಪಸ್ಥಿತರಿದ್ದರು.