ಚಿಕ್ಕಮಗಳೂರು: ಅನ್ಯಾಯ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್: ಅನ್ಯಾಯ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರ ಜಿಲ್ಲೆಯ ಕಡೂರು ತಾಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ.

Ad Widget ... ..

ORB NRG ಎಂಬ ಕಂಪನಿ ರೈತರ ಜಮೀನಿನ ಮೇಲೆ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಕೆಗೆ ಪ್ಲಾನ್ ಮಾಡಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಉಂಟಾಗಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದರು.

Ad Widget

ಅಲ್ಲದೆ ಇದರಿಂದ ನಮಗೆ ನಯಾ ಪೈಸೆ ಪರಿಹಾರ ನೀಡಲಿಲ್ಲ, ನಾವು ಮನೆ ಕಟ್ಟಬೇಕು, ನೀವು ತಂತಿ ಹೇಗೆ ಎಳೆದ್ರಿ? ನಮಗೆ ಪರಿಹಾರವನ್ನು ನೀಡದೇ ಯಾಕೆ ಅನ್ಯಾಯ ಮಾಡುತ್ತಿದ್ದೀರಿ? ಎಂದು ರೈತರು ಪ್ರಶ್ನೆ ಮಾಡಿದ್ದಾರೆ.

ಹೀಗೆ ಅನ್ಯಾಯ ವಿರೋಧಿಸಿ, ಖಾಸಗಿ ಕಂಪನಿಯ ದಬ್ಬಾಳಿಕೆ ವಿರೋಧಿಸಿ ಪ್ರತಿಭಟಿಸುತ್ತಿದ್ದಾಗ ರೈತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

https://m.facebook.com/story.php?story_fbid=pfbid0jsqkoYfoVgxDYnqPQha9wsWMNjBy2W96S6cio1yeAoCrZhDbYXp97oCcGiX4vzDJl&id=100083341387297

Leave a Comment

Your email address will not be published. Required fields are marked *