April 2022

ಶೃಂಗೇರಿ ಶಾರದೆಗೆ ಪ್ರಕೃತಿಯ ಪ್ರಭಾವಳಿ| ಗುಡುಗು- ಮಿಂಚಿನ ಸಮ್ಮಿಲನದಲ್ಲಿ ಅತ್ಯದ್ಭುತ ನೋಟ|

ಸಮಗ್ರ ನ್ಯೂಸ್: ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮಳೆ ಜೊತೆಗೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯಕಾವ್ಯ ನೋಡುಗರ ಮನಸೊರೆಗೊಂಡಿದೆ. […]

ಶೃಂಗೇರಿ ಶಾರದೆಗೆ ಪ್ರಕೃತಿಯ ಪ್ರಭಾವಳಿ| ಗುಡುಗು- ಮಿಂಚಿನ ಸಮ್ಮಿಲನದಲ್ಲಿ ಅತ್ಯದ್ಭುತ ನೋಟ| Read More »

ಮಾಣಿ : ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ| ಆಸ್ಪತ್ರೆಗೆ ಸಾಗಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಸಮಗ್ರ ನ್ಯೂಸ್ : ಹೆದ್ದಾರಿಯಲ್ಲಿ ರಿಕ್ಷಾ ಪಲ್ಟಿಯಾಗಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಮಾಣಿ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ. ರಿಕ್ಷಾ ಚಾಲಕನನ್ನು ಪುತ್ತೂರಿನ ನವೀನ್ ಎಂದು ಗುರುತಿಸಲಾಗಿದೆ. ಈತ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಮಾಣಿ ಸಮೀಪ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಚಾಲಕ ಗಂಭೀರ ಗಾಯಗೊಂಡಿದ್ದರು. ಈ ವೇಳೆ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಣಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಕಾರಿನಲ್ಲಿ ತುಂಬೆ ಫಾದರ್ ಮುಲ್ಲರ್

ಮಾಣಿ : ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ| ಆಸ್ಪತ್ರೆಗೆ ಸಾಗಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು Read More »

ನಾಳೆ ಜೆಡಿಎಸ್ ರಾಜ್ಯಾದ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಪದಗ್ರಹಣ

ಸಮಗ್ರ ನ್ಯೂಸ್: ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‍ ರಾಜ್ಯಾಧ್ಯಕ್ಷರಾಗಿ ಎ.17ರಂದು ಪದಗ್ರಹಣ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ನಾಳೆ ಬೆಳಗ್ಗೆ 10.15ಕ್ಕೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರು,

ನಾಳೆ ಜೆಡಿಎಸ್ ರಾಜ್ಯಾದ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಪದಗ್ರಹಣ Read More »

ಬೆಳ್ತಂಗಡಿ: ಪೈಪ್ ಪೈನ್ ಕೊರೆದು ಪೆಟ್ರೋಲ್ ಕಳ್ಳತನಕ್ಕೆ ಯತ್ನ

ಸಮಗ್ರ ನ್ಯೂಸ್: ಬೆಂಗಳೂರು – ಮಂಗಳೂರು ಪೆಟ್ರೋಲ್ ಉತ್ಪನ್ನ ಸಾಗಿಸವ ಪಿ.ಎಚ್ .ಎಂ.ಬಿ.ಎಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಳಿ ಎ.15 ರಂದು ಬೆಳಕಿಗೆ ಬಂದಿದೆ. ರಸ್ತೆಬದಿಯ ಮೋರಿಯ ಬಳಿ ಮಣ್ಣು ಅಗೆದು ಪಪೈನ್ನು ಕೊರೆದು ಪೈಪಿನ ಮೂಲಕ ಕಳ್ಳತನ ನಡೇಸಲು ಯತ್ನಿಸಿದ್ದಾರೆ ಎಂದು ಸಂಶಯಿಸಲಾಗಿದೆ. ಇನ್ನು ಕಳ್ಳತನ ನಡೆದ ಪೈಪಿನ ಶೇಖರಣಾ ಸ್ಥಳ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ

ಬೆಳ್ತಂಗಡಿ: ಪೈಪ್ ಪೈನ್ ಕೊರೆದು ಪೆಟ್ರೋಲ್ ಕಳ್ಳತನಕ್ಕೆ ಯತ್ನ Read More »

ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಈಜು ತರಬೇತುದಾರ

ಸಮಗ್ರ ನ್ಯೂಸ್: ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಈಜು ತರಬೇತುದಾರ ಮಂಜುನಾಥ್ ಮಜಳ್ಕರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಏ.15 ರ ಶನಿವಾರ ನಡೆದಿದೆ. ಕಾರವಾರದ ನಿವಾಸಿಯಾಗಿರುವ ಮಂಜುನಾಥ ಮಜಳ್ಕರ್‌ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ ನಲ್ಲಿ ಈಜುಗಾರ ತರಬೇತಿಗಾರನಾಗಿ ಕೆಲಸ ಮಾಡಿಕೊಂಡಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಏ.15ರ ಶನಿವಾರ ಮಧ್ಯಾಹ್ನ ಸ್ಪೋಟ್ಸ್‌ ಕ್ಲಬ್‌ನ ಗ್ರೀನ್‌‌ರೂಮ್‌‌ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಮಂಜುನಾಥ್ ರ ಅಣ್ಣ ವಿನಾಯಕ ಸುರೇಶ ಮಜಳ್ಕರ್

ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ಈಜು ತರಬೇತುದಾರ Read More »

ಕೇರಳದ ಪಾಲಕ್ಕಾಡ್ ನಲ್ಲಿ ನೆತ್ತರೋಕುಳಿ| 24 ಗಂಟೆಯಲ್ಲಿ ಎಸ್ಡಿಪಿಐ, ಆರ್ ಎಸ್ಎಸ್ ಮುಖಂಡರ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಕೇರಳದ ಪಾಲಕ್ಕಾಡ್​​ನಲ್ಲಿ ಶುಕ್ರವಾರ(ಎ.15) ಎಸ್ಡಿಪಿಐ ಮತ್ತು ಶನಿವಾರ(ಎ.16)ಆರ್​​​ಎಸ್​ಎಸ್​ ಕಾರ್ಯಕರ್ತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಒಂದೇ ದಿನದಲ್ಲಿ ಈ ಘಟನೆ ನಡೆದಿದ್ದು, ಪಾಲಕ್ಕಾಡ್ ನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇಂದು (ಎ.16) ಕೊಲೆಯಾದ ವ್ಯಕ್ತಿಯನ್ನು ಆರ್​​ಎಸ್​​ಎಸ್​​​ ಮುಖಂಡ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. 3 ಬೈಕ್​ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಿನ್ನೆ(ಎ.15) ಪಾಲಕ್ಕಾಡ್​​ನಲ್ಲಿ ಎಸ್​ಡಿಪಿಐ ಮುಖಂಡ ಝುಭೈರ್ ಎಂಬಾತನ ಹತ್ಯೆ

ಕೇರಳದ ಪಾಲಕ್ಕಾಡ್ ನಲ್ಲಿ ನೆತ್ತರೋಕುಳಿ| 24 ಗಂಟೆಯಲ್ಲಿ ಎಸ್ಡಿಪಿಐ, ಆರ್ ಎಸ್ಎಸ್ ಮುಖಂಡರ ಬರ್ಬರ ಹತ್ಯೆ Read More »

ಉಳ್ಳಾಲ: ಕೆಎಸ್‌ ಆರ್‌ ಟಿಸಿ ಬಸ್-ಬೈಕ್‌ ಢಿಕ್ಕಿ; ಸವಾರ ಮೃತ್ಯು

ಸಮಗ್ರ ನ್ಯೂಸ್ : ಕೆಎಸ್‌ ಆರ್‌ ಟಿಸಿ-ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಬೋಳೂರು ಜಾರಂದಾಯ ದೈವಸ್ಥಾನ ಬಳಿಯ ನಿವಾದಿ ದಿ. ನಾರಾಯಣ ಎಂಬವರ ಪುತ್ರ ರಾಜೇಶ್‌ ಬೋಳೂರು(50) ಮೃತರು. ಕಿನ್ಯಾ ಸಮೀಪದ ಆಕ್ಸಿ ಬ್ಲ್ಯೂ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭ ಚೆಂಬುಗುಡ್ಡೆ ಸಮೀಪ ಅಪಘಾತಕ್ಕೀಡಾಗಿದ್ದರು. ಎ.3ರಂದು ಇವರಿದ್ದ ಬೈಕಿಗೆ ಮುಡಿಪುವಿನಿಂದ ಮಂಗಳೂರು ಕಡೆಗೆ

ಉಳ್ಳಾಲ: ಕೆಎಸ್‌ ಆರ್‌ ಟಿಸಿ ಬಸ್-ಬೈಕ್‌ ಢಿಕ್ಕಿ; ಸವಾರ ಮೃತ್ಯು Read More »

ಶಿವಮೊಗ್ಗ: ಹರ್ಷ ಕೊಲೆಗೆ ಪ್ರತೀಕಾರಕ್ಕೆ ಸಂಚು ರೂಪಿಸುತ್ತಿದ್ದ 10 ಮಂದಿ ಬಂಧನ

ಸಮಗ್ರ ನ್ಯೂಸ್: ಹರ್ಷ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನ ಹತ್ಯೆಗೆ ಸ್ಕೆಚ್ ಹಾಕಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಶಿವಮೊಗ್ಗ ನಗರದ ಪೊಲೀಸರು, ರೌಡಿ ಶೀಟರ್ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ಬಳಿಕ, ಮತ್ತೊಂದು ಕೋಮುಗಲಭೆಗೆ ಸಂಚನ್ನು ರೌಡಿ ಶೀಟರ್ ಪ್ರವೀಣ್ ಅಂಡ್ ಟೀಂ ರೂಪಿಸಿತ್ತು ಎನ್ನಲಾಗಿದೆ. ಈ ಮಾಹಿತಿಯನ್ನು ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು, ರೌಡಿ ಶೀಟರ್ ಪ್ರವೀಣ್ ಎಂಬಾತ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ

ಶಿವಮೊಗ್ಗ: ಹರ್ಷ ಕೊಲೆಗೆ ಪ್ರತೀಕಾರಕ್ಕೆ ಸಂಚು ರೂಪಿಸುತ್ತಿದ್ದ 10 ಮಂದಿ ಬಂಧನ Read More »

ಸಂತೋಷ್ ಆತ್ಮಹತ್ಯೆಗೆ ಮೊದಲು ಮಾಡಿದ್ದೇನು? ಸಾವಿನ ಕದತಟ್ಟಿದ ಆ ಕ್ಷಣ…!

ಸಮಗ್ರ ನ್ಯೂಸ್ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಆರೋಪ ಹಿನ್ನೆಲೆ ಸಚಿವ ಕೆ.ಎಸ್‌. ಈಶ್ವರಪ್ಪ ನಿನ್ನೆ ಸಂಜೆ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸಂತೋಷ್‌ ಸಾವಿನ ಸುತ್ತ ಅನುಮಾನಗಳು ಹೆಚ್ಚಾಗುತ್ತಿದ್ದು, ಸಾವಿಗೂ ಮುನ್ನ ಏನು ಮಾಡಿದ್ದಾರೆ ರಹಸ್ಯ ಮಾಹಿತಿಯ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ. ಶಾಂಭವಿ ಲಾಡ್ಜ್ ನಲ್ಲಿ ಏನಾಗಿತ್ತು? ಉಡುಪಿಯ ಶಾಂಭವಿ ಲಾಡ್ಜ್ ಗೆ ರಾತ್ರಿ 9.30ಕ್ಕೆ ಕೊಠಡಿಗೆ ಬಂದು ಡೋರ್‌ ಲಾಕ್‌ ಮಾಡಿಕೊಂಡು ಏಕಾಂಗಿಯಾಗಿ 2 ಗಂಟೆಗಳ ಕಾಲ ಇದ್ದರು. ರಾತ್ರಿ 11.19-11.45ರವರೆಗೆ

ಸಂತೋಷ್ ಆತ್ಮಹತ್ಯೆಗೆ ಮೊದಲು ಮಾಡಿದ್ದೇನು? ಸಾವಿನ ಕದತಟ್ಟಿದ ಆ ಕ್ಷಣ…! Read More »

ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಪರಾರಿ| ಎರಡು ಮನೆಗಳಿಗೆ ಬೆಂಕಿ

ಸಮಗ್ರ ನ್ಯೂಸ್: ಹಿಂದೂ ಯುವತಿಯೊಂದಿಗೆ ಪರಾರಿಯಾದ ಮುಸ್ಲಿಂ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಆಗ್ರಾದ ರುನಕ್ತಾ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ. ಇಲ್ಲಿನ ಜಿಮ್ ಒಂದರ ಮಾಲೀಕ ಸಾಜಿದ್ ಅವರ ಮನೆಗೆ ಧರಮ್ ಜಾಗರಣ ಸಮನ್ವಯ್ ಸಂಘದ ಸದಸ್ಯರು ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೊಂದು ಮನೆಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಯುವತಿಯನ್ನು ಸಾಜೀದ್‌

ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಪರಾರಿ| ಎರಡು ಮನೆಗಳಿಗೆ ಬೆಂಕಿ Read More »