ಪುತ್ತೂರು: ಮರದ ಕೊಂಬೆ ಬಿದ್ದು ಯುವಕ ದುರ್ಮರಣ

Ad Widget ... ..

ಸಮಗ್ರ ಕ್ರೈ ಡೆಸ್ಕ್: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೊಂಬೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

Ad Widget

ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಮೃತ ದುರ್ದೈವಿ. ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ಯುವಕ ಬಾತಿಷ್ ಚಿರಪರಿಚಿತರಾಗಿದ್ದು, ಕೂಡುರಸ್ತೆ SKSSF ಸಕ್ರಿಯ ಸದಸ್ಯರಾಗಿದ್ದ. ಎಲ್ಲರೊಂದಿಗೆ ಆತ್ಮೀಯವಾಗಿರುತ್ತಿದ್ದ ಈತನ ದಾರುಣ ಸಾವು ಕುಟುಂಬ ಹಾಗೂ ಊರವರಿಗೆ ಆಘಾತ ತಂದಿದೆ.

Leave a Comment

Your email address will not be published. Required fields are marked *