ಮಂಗಳೂರು: ಸಿಟಿ ಬಸ್ ಮೇಲೆ ತೆಂಗಿನಮರವೊಂದು ಬಿದ್ದ ಘಟನೆ ಆ. 17 ರ ನಗರದ ಮಲ್ಲಿಕಟ್ಟೆ ವೃತ್ತದ ಬಳಿ ನಡೆದಿದೆ.
ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ. ಬೆಳಗ್ಗೆ ಸುಮಾರು ಹತ್ತುಗಂಟೆ ವೇಳೆ ಚಲಿಸುತ್ತಿದ್ದ 15 ನಂಬರ್ ನ ಸಿಟಿ ಬಸ್ ಮೇಲೆ ಬಿದ್ದಿದೆ. ತೆಂಗಿನ ಮರ ಬಸ್ ನ ಹಿಂಬಂದಿಗೆ ಬಿದ್ದ ಕಾರಣ ಸಂಭವನೀಯ ಅಪಾಯ ತಪ್ಪಿದೆ.
ಸ್ಥಳಕ್ಕೆ ಮಾಜಿ ಎಮ್.ಎಲ್.ಸಿ ಐವನ್ ಡಿಸೋಜ್ ಅವರು ಹಾಗು ಮಾಜಿಮೇಯರ್ ಶಶಿಧರ ಹೆಗ್ಡೆಯವರು ಭೇಟಿ ನೀಡಿದರು

ಬಿದ್ದ ತೆಂಗಿನ ಮರದಿಂದ ಸಾರ್ವಜನಿಕರು ಎಳೆನೀರು ಕಿತ್ತು ಕೊಂಡೊಯ್ಯುತ್ತುರುವ ದೃಶ್ಯ ಕಂಡುಬಂತು.