ಕರಾವಳಿಯಲ್ಲಿ ಮತ್ತೆ ತಳವಾರ ಝಳಪಿಸಿದ ದುಷ್ಕರ್ಮಿಗಳು, ಗ್ರಾ.ಪಂ ಅಧ್ಯಕ್ಷನ ಕೊಲೆ ಯತ್ನ

ಕಾಪು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೇರೂರು ಇವರ ಕೊಲೆ ಯತ್ನ ನಡೆದ ಬಗ್ಗೆ ವರದಿಯಾಗಿದೆ.

Ad Widget ... ..

ಬಂಟಕಲ್ಲು ಹೇರೂರಿನಲ್ಲಿ ತನ್ನ ಅಂಗಡಿ ಬಾಗಿಲು ಮುಚ್ಚುವ ಸಮಯದಲ್ಲಿ ಸ್ಥಳಕಾಗಮಿಸಿದ ತಲವಾರು ಸಮೇತವಾಗಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗಣೇಶ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಲು ಪ್ರಯತ್ನಿಸಿದರು ಈ ಸಮಯದಲ್ಲಿ ಬೊಬ್ಬೆ ಹಾಕಿದ ಶೆಟ್ಟಿ ಪಾರಾಗಲು ಯತ್ನಿಸಿದರು ಈ ಸಂಧರ್ಭದಲ್ಲಿ ಬೊಬ್ಬೆ ಕೇಳಿದ ಸ್ಥಳೀಯರು ಜಮಾವಣೆಯಾಗಿ ದುಷ್ಕರ್ಮಿಗಳಿಗೆ ಗೂಸ ನೀಡಿದ್ದಾರೆ.

Ad Widget

ಗಣೇಶ್ ಶೆಟ್ಟಿ ಹೆರೂರು ಮಜೂರು ಗ್ರಾಮ ಪಂಚಾಯತ್ ಮೂರು ಅವಧಿಯ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬೈಕಿನಲ್ಲಿ ಬಂದ ದುಷ್ಕರ್ಮಿಗಳನ್ನು ಸ್ಥಳೀಯರಾದ ಸ್ಟೀವನ್ ಮತ್ತು ಚರಣ್ ಎಂಬವರನ್ನು ಶಿರ್ವ ಪೋಲಿಸರು ಬಂಧಿಸಿದ್ದು ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *