ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ

ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವಡ್ಡರಮಾಡು ಎಂಬಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿದೆ.

Ad Widget ... ..

ಕುಟ್ಟ ಗ್ರಾಮದ ಪೂಜೆಕಲ್ ಎಂಬಲ್ಲಿ ಕಾಕೇರ ಕಾಳಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 12 ವರ್ಷದ ಗಂಡು ಕಾಡಾನೆ ಕಳೇಬರ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.

Ad Widget

ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ವಡ್ಡರಮಾಡು ಎಂಬಲ್ಲಿ ಹುಲಿ ದಾಳಿಗೆ 1 ತಿಂಗಳು ಪ್ರಾಯದ ಕಾಡಾನೆ ಮರಿ ಸಾವಿಗೀಡಾಗಿದೆ. ಕೆರೆಯ ಸಮೀಪ ಕಳೇಬರ ಭಾನುವಾರ ಪತ್ತೆಯಾಗಿದ್ದು, ದೇಹದ ಭಾಗದಲ್ಲಿ ಹುಲಿ ಪರಚಿದ ಗಾಯಗಳಿವೆ. 2 ದಿನಗಳ ಹಿಂದೆ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಎಸಿಎಫ್ ಕಂಬೇಯಂಡ ಗೋಪಾಲ್, ಆರ್‌ಎಫ್‌ಒ ಅಮಿತ್, ಡಿಆರ್‌ಎಫ್‌ಒ ಯೋಗೇಶ್ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *