ನಾನು ಹಿಂದುತ್ವಕ್ಕಾಗಿ ಹೋರಾಡಿದ್ರೂ ನನ್ನ ಬೆಂಬಲಕ್ಕೆ ಯಾರು ಇಲ್ಲ | ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಮಧುಗಿರಿ ಮೋದಿ

ಬೆಂಗಳೂರು: ಫೇಸ್ ಬುಕ್ ಲೈವ್ ನಲ್ಲಿ ಮೋದಿ ಪರ, ಬಲಪಂಥೀಯ ಪರ ಮಾತನಾಡುತ್ತಿದ್ದ , ಪ್ರವಾದಿ ವಿರುದ್ಧ ನಿಂದಿಸಿ ವಿವಿಧ ಠಾಣೆಗಳಲ್ಲಿ ಕೇಸ್ ಹಾಕಿಸಿಕೊಂಡಿದ್ದ ಮಧುಗಿರಿ ಮೋದಿ ದಯಾಮರಣವನ್ನು ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

Ad Widget ... ..

ಲವ್ ಜಿಹಾದ್, ಗೋಹತ್ಯೆ,ಅತ್ಯಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇನೆ. ಆದರೆ ಜಿಲ್ಲಾ ಪೊಲೀಸ್ ಇಲಾಖೆ ವಿಚಾರಣೆ ನೆಪದಲ್ಲಿ ದೌರ್ಜನ್ಯ ನಡೆಸುತ್ತಿದೆ. ಪೊಲೀಸರು ಸುಳ್ಳು ಕೇಸ್ ಹಾಕಿದ್ದಾರೆ. ನನಗೆ ಇದು ಸಹಿಸಲು ಅಸಾಧ್ಯ. ಅತ್ಯಾಚಾರಿಗಳು, ಭ್ರಷ್ಟರಿಗೆ ಇಲ್ಲದ ಕಿರುಕುಳ ನನಗೆ ಮಾತ್ರ ಯಾಕೆ ನನ್ನವರು ಯಾರೂ ಇದನ್ನು ಪ್ರಶ್ನಿಸುವುದಿಲ್ಲ ಎಂದು ಮಧುಗಿರಿ ಮೋದಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

Ad Widget

Leave a Comment

Your email address will not be published. Required fields are marked *