ಮುಖ್ಯಮಂತ್ರಿ ಆಮೇಲೆ ಆಗುವಿರಂತೆ, ಮೊದಲು ಕೋವಿಡ್ ನಿಯಂತ್ರಣದ ಕೆಲಸ ಮಾಡಿ: ಶಾಸಕರ ಕಿವಿಹಿಂಡಿದ ಯಡ್ಡಿ

ಬೆಂಗಳೂರು: ನಾಯಕತ್ವ ಬದಲಾವಣೆ, ಸಹಿ ಸಂಗ್ರಹಣೆ, ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡಿ ಎಂದು ತಮ್ಮ ಶಾಸಕರಿಗೆ ಬಿಎಸ್ ಯಡಿಯೂರಪ್ಪ ಬುದ್ದಿವಾದ ಹೇಳಿದ್ದಾರೆ.

Ad Widget ... ..

ಯಡಿಯೂರಪ್ಪ ಅವರ ಪರವಾಗಿ ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ನೀಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯೊಳಗಡೆ ಅಧಿಕಾರ ಕಿತ್ತಾಟದ ಮಧ್ಯೆ ಈ ಹೇಳಿಕೆ ಬಂದಿತ್ತು. ಇದಕ್ಕೆ ಪ್ರತಿಪಕ್ಷಗಳು ಕೂಡ ಭಾರೀ ಟೀಕೆಯನ್ನು ಮಾಡಿದ್ದರು. ಇದರಿಂದ ಸಿಡಿಮಿಡಿಗೊಂಡ ಸಿಎಂ ತಮ್ಮ ಶಾಸಕರಿಗೆ ಬುದ್ದಿವಾದವನ್ನು ಹೇಳಿದ್ದು ಈ ಸಂಕಷ್ಟದ ಸಮಯದಲ್ಲಿ ತಮ್ಮ ಕ್ಷೇತ್ರದಲ್ಲಿ ಜನರ ಪರ ನಿಂತ ಶಾಸಕರು ಕೆಲಸ ಮಾಡಬೇಕೆಂದು ಹೇಳಿದ್ದಾರೆ.

Ad Widget

ಟ್ವೀಟ್ ಮೂಲಕ ಯಾರು ಕೂಡ ರಾಜಕೀಯ ಹೇಳಿಕೆಗಳನ್ನು ನೀಡಬೇಡಿ ಮೊದಲು ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಯಡಿಯೂರಪ್ಪ ಹೈಕಮಾಂಡ್ ಬಯಸಿದರೆ ರಾಜೀನಾಮೆಗೆ ಸಿದ್ದ ಎಂದು ಹೇಳಿದ್ದರು. ಇದರ ಬಳಿಕ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

Leave a Comment

Your email address will not be published. Required fields are marked *