ಎಎಸ್ ಐ ಮೇಲೆ ಕೈಮಾಡಿದ ಬೈಕ್ ಸವಾರ ಅಂದರ್

Ad Widget ... ..

ಕಲಬುರಗಿ: ಲಾಕ್ ಡೌನ್ ಇದ್ದರು ಅನಗತ್ಯವಾಗಿ ತಿರುಗಾಡುತ್ತಿದ್ದ ಬೈಕ್ ಸವಾರ, ವಾಹನ ತಪಾಸಣೆಗಾಗಿ ತನ್ನನ್ನು ತಡೆದ ಎಎಸ್ಐ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ರಾಷ್ಟ್ರಪತಿ ವೃತ್ತದ ಬಳಿ ನಡೆದಿದೆ. ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅಶೋಕ ನಗರ ಪೊಲೀಸ್ ಠಾಣೆ ಮಹಿಳಾ ಎಎಸ್ ಐ ಸುಮಂಗಲ ಎಂಬವರು ಲಾಕ್ಡೌನ್ ನಡುವೆ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರ ಸ್ಥಳೀಯ ನಿವಾಸಿ ಮಹೇಶ್ ಕುಮಾರ್ ಎಂಬವರನ್ನು ತಡೆದಿದ್ದಾರೆ. ಮಾಸ್ಕ ಧರಿಸದ ಆತನನ್ನು, ಅಗತ್ಯ ದಾಖಲೆಗಳಿಗಾಗಿ ವಿಚಾರಿಸಿದಾಗ ಆತ ಉದ್ರಿಕ್ತಗೊಂಡ ಎಎಸ್ ಐ ಮೇಲೆ ಹಲ್ಲೆ ನಡೆಸಿದ್ದಾನೆ. ಮಹೇಶ್ ನನ್ನು ಬಂಧಿಸಿದ ಪೊಲೀಸರು ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *